Wednesday, July 2, 2025
spot_imgspot_img
spot_imgspot_img

ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ಇದರ ಆಶ್ರಯದಲ್ಲಿ ಸಂಪನ್ನಗೊಂಡ 50ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ

- Advertisement -
- Advertisement -

ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ಇದರ ಆಶ್ರಯದಲ್ಲಿ 50ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಅ.11 ರಂದು ಶ್ರೀ ಪಂಚಲಿಂಗೇಶ್ವರ ಸದನದಲ್ಲಿ ನಡೆಯಿತು.

ಪೂರ್ವಾಹ್ನ ಘಂಟೆ 7:30ಕ್ಕೆ: ಶ್ರೀ ಮಹಾಗಣಪತಿ ಹವನ ನಡೆಯಿತು. ಘಂಟೆ 9.00ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ವೇದಮೂರ್ತಿ ಎಮ್ ವಿಕಾಸ್ ಭಟ್, ಅರ್ಚಕರು, ಶ್ರೀರಾಮ ಮಂದಿರ ವಿಟ್ಲ ಇವರು ನಡೆಸಿಕೊಟ್ಟರು. ಧ್ವಜಾರೋಹಣವನ್ನು ಎಂ. ರಾಧಾಕೃಷ್ಣ ನಾಯಕ್, ಅಧ್ಯಕ್ಷರು ಶ್ರೀ ದೇವತಾ ಸಮಿತಿ, ವಿಟ್ಲ ಇವರು ನಡೆಸಿಕೊಟ್ಟರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಅನಂತೇಶ್ವರ ದೇವಸ್ಥಾನ ನಿವೃತ ಪ್ರಧಾನ ಅರ್ಚಕ ವಿಜಯ ಕುಮಾರ್ ಭಟ್ ನೆರವೇರಿಸಿದರು. ಅಧ್ಯಕ್ಷತೆಯನ್ನು ವಿಟ್ಲ ಅರಮನೆಯ ಬಂಗಾರು ಅರಸರು, ಮುಖ್ಯ ಅತಿಥಿಯಾಗಿ ಲಯನ್ಸ್ ಕ್ಲಬ್, ವಿಟ್ಲ ಇದರ ಅಧ್ಯಕ್ಷ ಕೆ ಮೋನಪ್ಪ ಗೌಡ ವಹಿಸಿದರು.

10.30: ಅಕ್ಷರ ಅಭ್ಯಾಸ, 1 ಗಂಟೆಗೆ: ಮಹಾಪೂಜೆ, 3 ಗಂಟೆಗೆ: ಡಾ| ಪಿ. ಕೆ. ದಾಮೋದರ್ ಪುತ್ತೂರು ಮತ್ತು ಬಳಗ ಇವರಿಂದ ವಾದ್ಯಗೋಷ್ಠಿ ನಡೆಯಿತು. 4 ಗಂಟೆಗೆ : ಭಜನಾಮೃತ – ವಿಜಯಕುಮಾರ್ ಭಟ್ ಮತ್ತು ಬಳಗ ಶ್ರೀ ಸಾರಸ್ವತ ಭಜನ ಮಂಡಳಿ ವಿಟ್ಲ, 5 ಗಂಟೆಗೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಪಂಚಲಿಂಗೇಶ್ವರ ಸದನಕ್ಕೆ ನಗರ ಭಜನೆ ನಡೆಯಿತು.

ಸಂಜೆ 5.30ಕ್ಕೆ ಸಾಮೂಹಿಕ ರಂಗಪೂಜೆ, 6.30: ರಾತ್ರಿ ಪೂಜೆ, 7.30: ವಿಸರ್ಜನಾ ಪೂಜೆ, ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಸಂತ ಮಂಟಪದ ಎದುರಿನ ಕೆರೆಯಲ್ಲಿ ಜಲಸ್ತಂಭನ ಮಾಡಲಾಯಿತು.

driving
- Advertisement -

Related news

error: Content is protected !!