Thursday, June 25, 2026
spot_imgspot_img
spot_imgspot_img

ದಂತಕಥೆಯಲ್ಲ..! ಸಾವಿರಾರು ವರ್ಷ ಕಾಲಗರ್ಭದಲ್ಲಿದ್ದ ಸಂಪತ್ತು ಪತ್ತೆ; ಮೀನುಗಾರರಿಗೆ ಸಿಕ್ತು ಅಮೂಲ್ಯ ಸೊತ್ತು

- Advertisement -
- Advertisement -

ಇಂಡೋನೇಷಿಯಾದ ಸುಮಾತ್ರಾ ದ್ವೀಪದ ಪಾಲೆಂಬಾಂಗ್ ಮತ್ತೆ ಸುದ್ದಿಯಲ್ಲಿದೆ. ಕಳೆದ ನೂರಾರು ವರ್ಷಗಳಿಂದ ದಂತಕಥೆಗಳಂತೆ ಅಲ್ಲಿನ ಜನತೆಯತಲ್ಲಿದ್ದ ಚಿನ್ನದ ಒರತೆಯ ಸತ್ಯಾಸತ್ಯತೆ ನಿಜವಾಗಿದೆ. ಪಾಲೆಂಬಾಂಗ್ ಬಳಿ ಮೊಸಳೆಯಿಂದ ಮುತ್ತಿಕೊಂಡಿರುವ ಮೂಸಿ ನದಿಯನ್ನು ಅನ್ವೇಷಿಸುವ ಮೀನುಗಾರರು, ರತ್ನದ ಕಲ್ಲುಗಳು, ಚಿನ್ನದ ವಿಧ್ಯುಕ್ತ ಉಂಗುರಗಳು, ನಾಣ್ಯಗಳು ಮತ್ತು ಕಂಚಿನ ಸನ್ಯಾಸಿಗಳ ಗಂಟೆಗಳನ್ನು ಒಳಗೊಂಡಂತೆ ಆಳವಾದ ನಿಧಿಯನ್ನು ಶೋಧಿಸಿದ್ದಾರೆ, ಅಪಾಯಕಾರಿ ನದಿಯಿಂದ ಚಿನ್ನದ ವಸ್ತುಗಳನ್ನು ಮೀನುಗಾರರು ಸಂಗ್ರಹಿಸಿ ತಮ್ಮದೇ ಅದೃಷ್ಟವೆಂದು ಬೀಗಿದ್ದಾರೆ.

ಇತಿಹಾಸಗಳ ಪ್ರಕಾರ ಇದೊಂದು ಸಾವಿರಾರು ವರ್ಷಗಳ ಹಿಂದೆ ವೈಭವಯುತದಿಂದ ಜನರು ಬಾಳಿ ಬದುಕಿದ್ದ ಸ್ಥಳ. ಅಲ್ಲಿನ ಮಾಧ್ಯಮ ಮೂಲಗಳ ಪ್ರಕಾರ, ಅಮೂಲ್ಯವಾದ ರತ್ನ, ನಾಣ್ಯ, ಬುದ್ಧನ ಮೂರ್ತಿ ಚಿನ್ನದ ಉಂಗುರಗಳು ಮತ್ತು ಕಂಚಿನ ಘಂಟೆ ಅಪರೂಪದ ವಸ್ತುಗಳು ಲಭ್ಯವಾಗಿದೆ.

ಇದುವರೆಗಿನ ಅತ್ಯಂತ ನಂಬಲಾಗದ ಆವಿಷ್ಕಾರಗಳಲ್ಲಿ ಒಂದಾದ 8 ನೇ ಶತಮಾನದ ಬುದ್ಧನ ರತ್ನ ಹೊದಿಕೆಯ ಆಳೆತ್ತರದ ಗಾತ್ರದ ಪ್ರತಿಮೆಯಾಗಿದೆ. ಇವೆಲ್ಲಾ ಕಲಾಕೃತಿಗಳು ಶ್ರೀ ವಿಜಯ ಆಡಳಿತಕ್ಕೂ ಹಿಂದಿನವು..! 7 ನೇ ಮತ್ತು 13 ನೇ ಶತಮಾನಗಳ ನಡುವೆ ವೈಭವಯುತವಾಗಿ ಬಾಳಿ ಬದುಕಿದ್ದ ಈ ಪ್ರಬಲ ಸಾಮ್ರಾಜ್ಯವು ಒಂದು ಶತಮಾನದ ನಂತರ ನಿಗೂಢವಾಗಿ ಕಣ್ಮರೆಯಾಯಿತು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

- Advertisement -

Related news

error: Content is protected !!