ತಮಿಳುನಾಡು: ಇಲ್ಲಿನ ತಿರುವಳ್ಳೂರು ಜಿಲ್ಲೆಯಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಮದುವೆ ಆಗಿದ್ದ ನವಜೋಡಿ ಭೀಕರ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತ ದಂಪತಿ ಅರಕ್ಕೊಣಮ್ ಮೂಲದ ಮನೋಜ್ ಕುಮಾರ್ (31) ಮತ್ತು ಪೆರುಗಲಥೂರ್ ಮೂಲದ ಕಾರ್ತಿಕಾ (30) ಎಂದು ತಿಳಿದುಬಂದಿದೆ.
ಮನೋಜ್ ಕುಮಾರ್ ಅವರು ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದರು. ಕಾರ್ತಿಕಾ ಖಾಸಗಿ ಕ್ಲೀನಿಕ್ ಒಂದರಲ್ಲಿ ವೈದ್ಯೆ ಆಗಿದ್ದರು. ಅ. 28ರಂದು ಇಬ್ಬರು ಮದುವೆ ಆಗಿದ್ದರು. ಪೂನಮೆಲೀ-ಅರಕ್ಕೊಣಮ್ ಹೆದ್ದಾರಿ ನಡುವಿನ ಕಡಂಬಥೂರ್ ಸಮೀಪ ಭಾನುವಾರ ರಾತ್ರಿ 9.45ರ ಸುಮಾರಿಗೆ ಎದುರಿನಿಂದ ಬಂದ ಕಾಂಕ್ರಿಟ್ ಮಿಕ್ಸರ್ ಲಾರಿ ತಿರುವ ಪಡೆಯಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದಿದೆ.
ಮಿಕ್ಸರ್ ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಘಟನೆ ನಡೆದ ಎರಡು ಗಂಟೆಯ ನಂತರ ಮಿಕ್ಸರ್ ಲಾರಿಯನ್ನು ತೆರವುಗೊಳಿಸಲಾಯಿತು. ಇದರ ಬೆನ್ನಲ್ಲೇ ಸ್ಥಳಕ್ಕೆ ಆಂಬ್ಯುಲೆನ್ಸ್ ದೌಡಾಯಿಸಿತು. ಆದರೆ, ಅಷ್ಟರಲ್ಲಾಗಲೇ ದಂಪತಿಗಳಿಬ್ಬರು ಸಾವಿಗೀಡಾಗಿದ್ದರು. ಘಟನೆಯ ಬೆನ್ನಲ್ಲೇ ಮಿಕ್ಸರ್ ಲಾರಿ ಡ್ರೈವರ್ ಎಸ್ಕೇಪ್ ಆಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡ್ರೈವರ್ಗಾಗಿ ಬಲೆ ಬೀಸಿದ್ದಾರೆ.