- Advertisement -
- Advertisement -



ಶಿವಮೊಗ್ಗ: ತಾಳಗುಪ್ಪ-ಬೆಂಗಳೂರು ರೈಲಿಗೆ ಸಿಲುಕಿ ಸಾಗರ ಕೋರ್ಟ್’ನ ಬೆಂಚ್ ಕ್ಲರ್ಕ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಗರ ತಾಲೂಕಿನ ಕುಗ್ವೆ-ಶಿರವಾಳ ರೈಲ್ವೆ ಗೇಟ್ ಬಳಿ ನಡೆದಿದೆ. ಸಾಗರದ ಲೋಹಿಯಾ ನಗರದ ನಿವಾಸಿ ನಾಗರಾಜ್(31) ಮೃತ ವ್ಯಕ್ತಿ.
ಸಾಗರ ಜೆಎಂಎಫ್ಸಿ ಕೋರ್ಟ್’ನಲ್ಲಿ ಎಫ್ಡಿಸಿ ಆಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲಿಗೆ ಸಿಲುಕಿ ದೇಹ ಚಿದ್ರ ಚಿದ್ರವಾಗಿದೆ. ರುಂಡ ಮುಂಡ ಬೇರ್ಪಟ್ಟಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


- Advertisement -








