Monday, June 30, 2025
spot_imgspot_img
spot_imgspot_img

ಅನಂತಾಡಿ: ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಲಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

- Advertisement -
- Advertisement -

ಅನಂತಾಡಿ: ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಲಾವಧಿ ಜಾತ್ರೆ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಇಂದು ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ರಾಮಚಂದ್ರ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷರೂ, ಆಡಳಿತ ಮುಕ್ತೇಸರರಾದ ಶ್ರೀ. ಬಿ. ನರೇಂದ್ರ ರೈ ನೆಲ್ತೊಟ್ಟು, ಆಡಳಿತಾಧಿಕಾರಿಯಾದ ಹಷೇಂದ್ರ ಶೆಟ್ಟಿ ಬಾಳಿಕೆ, ಚಲನಚಿತ್ರ ನಟರಾದ ಚೇತನ್ ರೈ, ದೇವಾಲಯದ ಮುಖ್ಯ ಕಾರ್ಯನಿರ್ವಾಹಕರಾದ ವಿವೇಕಾನಂದ ಶೆಟ್ಟಿ ಹಾಗೂ ಚೇತನ್ ಶೆಟ್ಟಿ ಹೊಸ ಒಕ್ಲು, ಹಾಗೂ ಊರಿನ ಸಮಸ್ತರು ಭಾಗವಹಿಸಿದ್ದರು.

vtv vitla
vtv vitla

ಕರಿಂಕ ಶ್ರೀ ದುರ್ಗಾ ಪರಮೇಶ್ವರಿ ವರ್ಷಾವಧಿ ಜಾತ್ರೆಯು ಬ್ರಹ್ಮಶ್ರೀ ನೀಲೇಶ್ವರ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮೇ.2 ಸೋಮವಾರದಂದು ರಾತ್ರಿ 8 ರಿಂದ ಮಹೋತ್ಸವ, ಉತ್ಸವ ಬಲಿ, ಶ್ರೀ ಭೂತ ಬಲಿ ನಡೆದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಮೇ.3 ಮಂಗಳವಾರದಂದು ಬೆಳಿಗ್ಗೆ 9ರಿಂದ ಹಗಲು ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ ನಡೆದು, ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

- Advertisement -

Related news

error: Content is protected !!