Friday, June 27, 2025
spot_imgspot_img
spot_imgspot_img

ಹಿಂದೂ ಯುವಕನಿಗೆ ಹಲ್ಲೆ, ಜೀವ ಬೆದರಿಕೆ ಪ್ರಕರಣ; ಮೂವರು ಅನ್ಯಕೋಮಿನ ಆರೋಪಿಗಳು ಅಂದರ್‌

- Advertisement -
- Advertisement -

ಶಿವಮೊಗ್ಗ: ನಗರದ ಸೀಗೆಹಟ್ಟಿಯಲ್ಲಿ ನಡೆದ ಯುವಕನ ಹಲ್ಲೆ, ಜೀವ ಬೆದರಿಕೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತನ್ವೀರ್‌ ಅಲಿಯಾಸ್‌ ಮಾರ್ಕೆಟ್ ಫೌಜಾನ್, ಅಜರ್ ಅಲಿಯಾಸ್ ಅಜ್ಜು, ಫರಾಜ್ ಅಲಿಯಾಸ್‌ ಚೋಟೆ ಬಂಧಿತರು. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಆರೋಪಿಗಳು ಸೋಮವಾರ ರಾತ್ರಿ ಸೀಗೆಹಟ್ಟಿ ಹಾಗೂ ಭರ್ಮಪ್ಪ ನಗರದ ಬಳಿ ಪ್ರವೀಣ್ ಎಂಬ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಇಟ್ಟಿಗೆಗಳಿಂದ ಭೀಕರವಾಗಿ ಹಲ್ಲೆ ಮಾಡಿದ್ದರು. ಬಂಧಿತ ಮೂವರು ಆರೋಪಿಗಳ ವಿರುದ್ಧ ಈಗಾಗಲೇ ವಿವಿಧ ಠಾಣೆಗಳಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ. ಮಾರ್ಕೆಟ್ ಫೌಜಾನ್ ಮೇಲೆ 5 ಪ್ರಕರಣ, ಅಜರ್ ಮೇಲೆ 3 ಪ್ರಕರಣ, ಫರಾಜ್ ಮೇಲೆ 4 ಪ್ರಕರಣಗಳಿವೆ. ಗಾಯಾಳು ಪ್ರವೀಣ್ ಮತ್ತು ಆತನ ಸಹಚರ ಪ್ರಕಾಶ್ ಕೆಲ ದಿನಗಳ ಹಿಂದೆ ಫೌಜಾನ್‌ಗೆ ಬೈದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

- Advertisement -

Related news

error: Content is protected !!