- Advertisement -
- Advertisement -

ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪದ ಬಾರ್ಯ ಗ್ರಾಮದ ಯುವತಿಯೊಬ್ಬಳು ನಾಪತ್ತೆಯಾಗಿದ್ದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾರ್ಯದ ಕುಡುಗುಡ್ಡೆ ಮನೆ ನಿವಾಸಿ ಅಬ್ದುಲ್ ಖಾದ್ರಿ ಎಂಬವರ ಮಗಳು ಸಾಹೀದಾ(19) ಎಂಬಾಕೆ ನ.19ರಂದು ಮಧ್ಯರಾತ್ರಿಯಿಂದ ನಾಪತ್ತೆಯಾಗಿರುವ ಯುವತಿ.
ತನ್ನ ಎಂಟು ಮಕ್ಕಳ ಪೈಕಿ ಐದು ಮಂದಿ ಹೆಣ್ಣು ಮಕ್ಕಳಾಗಿದ್ದು, ಇವರ ಪೈಕಿ ಕೊನೆಯವಳಾದ ಸಾಹೀದಾ ಶನಿವಾರ ರಾತ್ರಿ ಊಟ ಮಾಡಿ ಮಲಗಿದಾಕೆ ತಡ ರಾತ್ರಿ 1 ಗಂಟೆ ಸುಮಾರಿಗೆ ಎದ್ದು ನೋಡಿದಾಗ ನಾಪತ್ತೆಯಾಗಿರುವುದು ಕಂಡು ಬಂದಿರುತ್ತದೆ. ಈಕೆಗೆ ಕಳೆಂಜಿಬೈಲಿನ ಮುದಾಸೀರ್ ಎಂಬಾತನೊಂದಿಗೆ ಮೊಬೈಲ್ ಸಂಪರ್ಕ ಇದ್ದು , ಆತನೊಂದಿಗೆ ಹೋಗಿರುವ ಸಂಶಯವಿದೆ ಎಂದು ಅಬ್ದುಲ್ ಖಾದ್ರಿಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ನಾಪತ್ತೆಯಾದ ಯುವತಿಯು ಎಲ್ಲಿಯಾದರೂ ಪತ್ತೆಯಾದರೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಿದ್ದಾರೆ.
- ವಿಟ್ಲದಲ್ಲಿ ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್ನಿಂದ ಸಮಗ್ರ ಆರೋಗ್ಯ ಸೇವೆ
- ಒಂದು ಬಾಂಬ್… ಒಂದು ನಗರ… ಒಂದು ಶಾಶ್ವತ ಎಚ್ಚರಿಕೆ-:ಇವತ್ತು ಹಿರೋಶಿಮಾ ಡೇ
- ಸರ್ಕಾರಿ ಶಿಕ್ಷಕರಿಗೆ ಗುಡ್ ನ್ಯೂಸ್: TET ಉತ್ತೀರ್ಣತೆಗೆ ಕಾಲಾವಕಾಶ ವಿಸ್ತರಣೆ
- 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ
- ಸಂಪಾಜೆಯಲ್ಲಿ ಕಾಡು ಪ್ರಾಣಿ ಬೇಟೆ: 12 ಕೆಜಿ ಮಾಂಸದೊಂದಿಗೆ ಇಬ್ಬರು ಅರಣ್ಯ ಇಲಾಖೆಯ ವಶಕ್ಕೆ

- Advertisement -








