Saturday, June 28, 2025
spot_imgspot_img
spot_imgspot_img

ಉಳ್ಳಾಲ : ನಾಪತ್ತೆಯಾಗಿದ್ದ ಕಾರ್ ಡೀಲರ್ ಮೃತದೇಹ ಸೋಮೇಶ್ವರ ಸಮುದ್ರ ತೀರದಲ್ಲಿ ಪತ್ತೆ

- Advertisement -
- Advertisement -

ಉಳ್ಳಾಲ : ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆಯಲ್ಲಿ ಶೂ, ಮೊಬೈಲ್, ಪರ್ಸ್ ಇಟ್ಟು ನಾಪತ್ತೆಯಾಗಿದ್ದ ಕಾರ್ ಡೀಲರ್ ವಸಂತ ಅಮೀನ್ ಮೃತದೇಹ ಉಚ್ಚಿಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.

ಉಳ್ಳಾಲ ಧರ್ಮನಗರ ನಿವಾಸಿ ವಸಂತ್ ಅಮೀನ್(49) ಬುಧವಾರ ಮಧ್ಯಾಹ್ನದ ವೇಳೆ ಸೋಮೇಶ್ವರದ ರುದ್ರಪಾದೆಯಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಾಗಿತ್ತು. ಸ್ಥಳೀಯ ಮೀನುಗಾರರು, ಈಜುಗಾರರಿಂದ ಸಮುದ್ರದಲ್ಲಿ ಶೋಧ ಕಾರ್ಯ ಕೂಡ ನಡೆಸಿದ್ದರು.

ಆದರೆ ಇಂದು ಅಪರಾಹ್ನ ಉಚ್ಚಿಲ ಕಡಲ ಕಿನಾರೆಯಲ್ಲಿ ವಿಹಾರಕ್ಕೆ ಬಂದಿದ್ದ ಜೋಡಿಯೊಂದು ನೀರಾಟಕ್ಕಿಳಿದಾಗ ಯುವಕನ ಕಾಲಿಗೆ ವಸಂತ್ ಅವರ ಮೃತದೇಹ ಸಿಕ್ಕಿಕೊಂಡಿದೆ. ಭಯಗೊಂಡ ಯುವಕನು ಬೊಬ್ಬೆ ಹಾಕಿದಾಗ ಅಲ್ಲೇ ಇದ್ದ ನಿವೃತ್ತ ಯೋಧ
ಜಗನ್ನಾಥ್ ಕೋಟೆಕಾರ್ ಎಂಬವರು ನೀರಿಗಿಳಿದು ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ. ಮೂಲತಃ ಉಳ್ಳಾಲ ಬಸ್ತಿಪಡ್ಪು ನಿವಾಸಿಯಾದ ವಸಂತ್ ಅಮೀನ್ ತಿಂಗಳ ಹಿಂದಷ್ಟೆ ಉಳ್ಳಾಲದ ಧರ್ಮನಗರದಲ್ಲಿ ಒಂದಸ್ತಿನ ಸುಂದರವಾದ ಮನೆ ನಿರ್ಮಿಸಿದ್ದರು.

ಹಣಕಾಸಿನಲ್ಲಿ ವಸಂತ್ ಅವರಿಗೆ ಯಾವುದೇ ಮುಗ್ಗಟ್ಟು ಇರಲಿಲ್ಲ ಎನ್ನಲಾಗಿದ್ದು ವಸಂತ್ ಅವರು ಬಿಕರ್ನಕಟ್ಟೆಯ ಜಯಶ್ರೀ ಗೇಟ್ ಬಳಿ ಪಾಲುದಾರಿಕೆಯಲ್ಲಿ ಕಾರ್ ಡೀಲಿಂಗ್ ಕಚೇರಿ ಹೊಂದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ವಸಂತ್ ಅವರು ತನ್ನ ಸ್ನೇಹಿತರಲ್ಲಿ ವಿಪರೀತ ಹೊಟ್ಟೆ ನೋವೆಂದು ಹೇಳುತ್ತಿದ್ದರಂತೆ. ಮೃತದೇಹವನ್ನು ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರು ಪತ್ನಿ ನೀತಾ, ಮಗಳು ಜಿಯಾಳನ್ನು ಅಗಲಿದ್ದಾರೆ.

- Advertisement -

Related news

error: Content is protected !!