Sunday, May 12, 2024
spot_imgspot_img
spot_imgspot_img

ವರದಕ್ಷಿಣೆಗಾಗಿ ಪತ್ನಿ ಕೈಗೆ ಹಗ್ಗ ಕಟ್ಟಿ ಬಾವಿಗೆ ಇಳಿಬಿಟ್ಟ ಪತಿ

- Advertisement -G L Acharya panikkar
- Advertisement -

ವರದಕ್ಷಿಣೆ ನೀಡಲಿಲ್ಲ ಎಂದು ಪತಿಯೊಬ್ಬ ಪತ್ನಿಯ ಕೈಗೆ ಹಗ್ಗ ಕಟ್ಟಿ ಬಾವಿಗೆ ಇಳಿಬಿಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಉಷಾ ಎಂಬಾಕೆಯನ್ನು ಮಧ್ಯಪ್ರದೇಶದ ಜಾವಾದ್‌ನ ಕಿರ್ಪುರ ನಿವಾಸಿ ರಾಕೇಶ್ ಕೀರ್ ಎಂಬಾತನು 3 ವರ್ಷಗಳ ಹಿಂದೆ ವಿವಾಹವಾಗಿದ್ದನು. ಅಂದಿನಿಂದ ಆರೋಪಿ ವರದಕ್ಷಿಣೆಗಾಗಿ 3 ರಿಂದ 5 ಲಕ್ಷ ರೂ. ತರುವಂತೆ ಸದಾ ಕಿರುಕುಳ ನೀಡುತ್ತಿದ್ದನು.

ವಿವರಗಳ ಪ್ರಕಾರ ಆರೋಪಿಯು ಪತ್ನಿಯ ಕೈಗಳನ್ನು ಕಟ್ಟಿ ಬಾವಿಯಲ್ಲಿ ತೂಗುಹಾಕಿದ್ದ, ಬಳಿಕ ವಿಡಿಯೋವನ್ನು ಪತ್ನಿಯ ಸಂಬಂಧಿಕರಿಗೆ ಕಳುಹಿಸಿದ್ದನು. ಆಕೆಯ ಹೆತ್ತವರು ಬಳಿಕ ಗ್ರಾಮದ ಕೆಲವರನ್ನು ಸಂಪರ್ಕಿಸಿ ಮಗಳನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ರಾಕೇಶ್‌ ಕೀರ್‌ನನ್ನು ಬಂಧಿಸಲಾಗಿದೆ.

- Advertisement -

Related news

error: Content is protected !!