Sunday, May 12, 2024
spot_imgspot_img
spot_imgspot_img

ಬೈಕ್‌ಗೆ ಲಾರಿ ಡಿಕ್ಕಿ; ವ್ಯಕ್ತಿ ಮೃತ್ಯು..!

- Advertisement -G L Acharya panikkar
- Advertisement -

ಟಿಪ್ಪರ್‍‌ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯನಗರದ ಹಡಗಲಿ ತಾಲೂಕಿನ ಹೊಳಲು ಸಮೀಪದ ಗಿರಿಯಾಪುರ ಗ್ರಾಮದ ಬಳಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಹಾವೇರಿ ಜಿಲ್ಲೆಯ ಬೆಂಚಿಹಳ್ಳಿ ಗ್ರಾಮದ ಮಹಾಂತೇಶಗೌಡ (37) ಎಂದು ಗುರುತಿಸಲಾಗಿದೆ.

ಮಹಾಂತೇಶಗೌಡ ಅವರು ಹಡಗಲಿಯ ಮಕರಬ್ಬಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಎಂದಿನಂತೆ ಶಾಲೆಗೆ ಹೊರಟಿರುವಾಗ ಎದುರಿಗೆ ವೇಗವಾಗಿ ಬಂದ ಟಿಪ್ಪರ್‍‌ ಲಾರಿ ಬೈಕ್‌ಗೆ ಗುದ್ದಿದೆ. ರಭಸವಾಗಿ ಡಿಕ್ಕಿ ಹೊಡೆದಿದ್ದರಿಂದ ಶಿಕ್ಷಕ ಮಹಾಂತೇಶ ಹಾರಿ ಬಿದ್ದಿದ್ದು, ಮೆದುಳು ಕಿತ್ತು ಹೊರಬಿದ್ದಿದೆ. ಈ ಭೀಕರ ಘಟನೆಯಿಂದ ಮಹಾಂತೇಶ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಈ ಸಂಬಂಧ ಹಿರೇಹಡಗಲಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!