- Advertisement -
- Advertisement -
ಕಾಡಾನೆ ತುಳಿತಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಕ್ಕಬ್ಬೆ ಸಮೀಪ ನಾಲಾಡಿಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಕಂಬೆಯಂಡ ರಾಜ ದೇವಯ (59) ಎಂದು ಗುರುತಿಸಲಾಗಿದೆ.
ನಾಲಾಡಿಯಲಿರುವ ತಮ್ಮ ಮನೆಯ ಸಮೀಪದ ತೋಟಕ್ಕೆ ತೆರಳಿದಾಗ ದಿಢೀರ್ ಕಾಣಿಸಿಕೊಂಡ ಆನೆ ಇವರ ಮೇಲೆ ಎರಗಿ ತುಳಿದುಕೊಂದಿದೆ. ಒಟ್ಟು ಮೂರು ಆನೆಗಳು ತೋಟದಲ್ಲಿ ಇದ್ದವು ಎಂದು ಹೇಳಲಾಗುತ್ತಿದೆ. ಕೆ.ಕೆ ರಾಜ ದೇವಯ್ಯ ಅವರು ಕೃಷಿಕರು ಹಾಗೂ ಕಕ್ಕಬೆಯಲ್ಲಿ ಸ್ವಂತ ಆಟೋ ಬಾಡಿಗೆಗೆ ಓಡಿಸುತ್ತಿದ್ದರು.
- Advertisement -