Monday, April 29, 2024
spot_imgspot_img
spot_imgspot_img

ಬಸ್​​ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ವ್ಯಕ್ತಿ ಸಾವು..!

- Advertisement -G L Acharya panikkar
- Advertisement -

ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಗೆ ಹಠಾತ್ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಕೃಷ್ಣ ( 60) ಎಂದು ಗುರುತಿಸಲಾಗಿದೆ.

ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಮೆಜೆಸ್ಟಿಕ್​ನಿಂದ ವ್ಯಕ್ತಿ ಬಸ್​ ಹತ್ತಿದ್ದ. ಟಿಕೆಟ್ ಪಡೆದು ಸೀಟ್​​ನಲ್ಲಿ ಕುಳಿತುಕೊಂಡ ಹದಿನೈದು ನಿಮಿಷದಲ್ಲೇ ಹಾರ್ಟ್ ಅಟ್ಯಾಕ್ ಆಗಿದೆ. ಬಸ್​ ನವರಂಗ್ ಬಳಿ ಬರುತ್ತಿತ್ತು.

ಏಕಾಏಕಿಯಾಗಿ ವ್ಯಕ್ತಿ ಒದ್ದಾಡ್ತಿರೋದನ್ನು ನೋಡಿದ ಪ್ರಯಾಣಿಕರು ಗಾಬರಿಯಾಗಿ ಕಿರುಚಾಟ ನಡೆಸಿದ್ದಾರೆ. ಕೂಡಲೇ ಬಿಎಂಟಿಸಿ ಬಸ್​ನಲ್ಲೇ ಖಾಸಗಿ ಆಸ್ಪತ್ರೆಗೆ ಶಿಫ್ಟ್​​​ ಮಾಡಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರೋದಾಗಿ ತಿಳಿಸಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Related news

error: Content is protected !!