Monday, May 20, 2024
spot_imgspot_img
spot_imgspot_img

ಬಂಟ್ವಾಳ : ವ್ಯಕ್ತಿಗೆ ನಾಲ್ವರಿಂದ ಹಲ್ಲೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲು

- Advertisement -G L Acharya panikkar
- Advertisement -
This image has an empty alt attribute; its file name is shri-energy-solar-667x1024.jpeg
This image has an empty alt attribute; its file name is saptha-new-10-819x1024.jpg
This image has an empty alt attribute; its file name is VC_PUC_-1-819x1024.jpg

ಬಂಟ್ವಾಳ : ದ್ವಿಚಕ್ರ ವಾಹನದಲ್ಲಿ ಡಿಪೋಗೆ ಹಾಲು ಸಾಗಿಸುತ್ತಿದ್ದ ವ್ಯಕ್ತಿಗೆ ನಾಲ್ವರ ತಂಡ ಹಲ್ಲೆ ನಡೆಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ಪ್ರವೀಣ್ ರೋಷನ್ ವಾಸ್ ಎಂಬವರು ಡಿಪೋಗೆ ಹಾಲು ಕೊಂಡೊಯ್ಯುತ್ತಿದ್ದ ವೇಳೆ ಆರೋಪಿಗಳಾದ ಅಶೋಕ್ ಸಾಲಿಯಾನ್, ಡೊಂಬಯ್ಯಾ, ಹರಿಣಾಕ್ಷಿ ಹಾಗೂ ಪೂರ್ಣಿಮಾ ಎಂಬವರುಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಪ್ರವೀಣ್ ರೋಷನ್ ವಾಸ್ ಅವರ ಸಹೋದರಿ ಸ್ಥಳಕ್ಕೆ ತೆರಳಿದ್ದು ಅವರೊಂದಿಗೆ ಅಶೋಕ್ ಸಾಲಿಯಾನ್ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಆರೋಪಿಗಳ ಹಲ್ಲೆಯಿಂದ ಪ್ರವೀಣ್ ರೋಷನ್ ವಾಸ್ ಹಾಗೂ ಅವರ ಸಹೋದರಿ ಕೂಡಾ ಗಾಯಗೊಂಡಿದ್ದಾರೆ, ಆರೋಪಿಗಳು ಹಲ್ಲೆ ನಡೆಸಿದ್ದಲ್ಲದೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ : 59/2024, ಕಲಂ: 354(ಬಿ) 324,504,506 ಜೊತೆಗೆ 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವೀಣ್ ರೋಷನ್ ವಾಸ್ ರವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದ್ದು, ಅ.ಕ್ರ ನಂಬ್ರ : 60/2024 ಕಲಂ : 354(A) ,323,504,506 ಐ ಪಿ ಸಿ ರಂತೆ ಪ್ರಕರಣ ದಾಖಲಾಗಿದ್ದು, ಸದ್ರಿ ಎರಡೂ ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!