Friday, May 3, 2024
spot_imgspot_img
spot_imgspot_img

ಕಾರ್ಕಳ: ಷೇರು ಮಾರುಕಟ್ಟೆಯ ಹೆಸರಿನಲ್ಲಿ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ !

- Advertisement -G L Acharya panikkar
- Advertisement -

ಕಾರ್ಕಳ: ಷೇರು ಮಾರುಕಟ್ಟೆಯ ಹೆಸರಿನಲ್ಲಿ ಯುವಕನೊರ್ವನಿಗೆ ಆನ್ಲೈನ್ ನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ.

ಶಿವಪ್ರಸಾದ್ (26) ಕಾರ್ಕಳ ಇವರಿಗೆ ದಿನಾಂಕ 29-11-2023 ರಂದು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಕುರಿತು ಮಂಜಿತ್ ಸಿಂಘ್ ಎಂಬ ವ್ಯಕ್ತಿ ಪ್ಯಾಂತನ್ ವೆಂಚರ್ಸ್ ಎಂಬ ಸಂಸ್ಥೆಯು ಭಾರತದಲ್ಲಿ ಹೂಡಿಕೆ ಪ್ರಾರಂಭಿಸಿದೆ ಎಂಬುದಾಗಿ ಇವರ ಮೊಬೈಲ್‌ ಗೆ ಸಂದೇಶ ಕಳುಹಿಸಿದ್ದಾನೆ.

ಅವರು ಕಳುಹಿಸಿದ ಲಿಂಕ್‌ಗೆ ಸೇರಿದ ಶಿವಪ್ರಸಾದ್ ಆ ಲಿಂಕ್‌ನಲ್ಲಿ ಷೇರು ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ನಂತರ ಆರೋಪಿ ಬೇರೆ ಆಪ್ ಡೌನ್ ಲೋಡ್ ಮಾಡಲು ತಿಳಿಸಿದ್ದು ಅವರು ಕಳುಹಿಸಿದ ಲಿಂಕ್ ಮೂಲಕ ಆಪ್ ಡೌನ್ ಲೋಡ್ ಮಾಡಿದ್ದಾರೆ.

ಹಂತಹಂತವಾಗಿ ರೂ 7,35,827.80 ಹಣವನ್ನು ತನ್ನ ಐಸಿಐಸಿಐ ಬ್ಯಾಂಕ್ ಖಾತೆಯಿಂದ ಆರೋಪಿ ತಿಳಿಸಿದ ಖಾತೆಗಳಿಗೆ ವರ್ಗಾವಣೆ ಮಾಡಿದ್ದು ನಂತರ ವಾಟ್ಸಾಪ್ ಗ್ರೂಪ್‌ನಿಂದ ತೆಗೆದುಹಾಕಿದ್ದಾನೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 28/2024 ಕಲಂ:66 ಐಟಿ ಕಾಯಿದೆ ಯಂತೆ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!