Monday, April 29, 2024
spot_imgspot_img
spot_imgspot_img

ಸ್ನೇಹಿತರ ಜೊತೆ ಟ್ರೆಕ್ಕಿಂಗ್‌ ಬಂದಿದ್ದ ಯುವಕ ನಾಪತ್ತೆ

- Advertisement -G L Acharya panikkar
- Advertisement -

ಸ್ನೇಹಿತರ ಜೊತೆ ಟ್ರೆಕ್ಕಿಂಗ್‌ ಬಂದಿದ್ದ ಉತ್ತರ ಪ್ರದೇಶ ಮೂಲದ ಯುವಕ ನಾಪತ್ತೆ ಆಗಿರುವ ಘಟನೆ ರಾಮನಗರ, ಮಾಗಡಿ ತಾಲೂಕು ಸಾವನದುರ್ಗದಲ್ಲಿ ನಡೆದಿದೆ.

ಸಾಲು ಸಾಲು ರಜೆ ಇದ್ದ ಕಾರಣ ಭಾನುವಾರ ಸ್ನೇಹಿತರೊಂದಿಗೆ ಉತ್ತರ ಪ್ರದೇಶ ಮೂಲದ ಗಗನ್‌ದೀಪ್ ಸಿಂಗ್ (30) ಏಕಶಿಲಾ ಬೆಟ್ಟ ಸಾವನದುರ್ಗಕ್ಕೆ ಟ್ರೆಕ್ಕಿಂಗ್‌ ಗೆ ಬಂದಿದ್ದಾರೆ. ಈ ವೇಳೆ ನಾಪತ್ತೆಯಾಗಿದ್ದು, ಗಗನ್ ಸ್ನೇಹಿತ ಬೆಟ್ಟದಿಂದ ಇಳಿದು ಬಂದು ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗೆ ನಾಪತ್ತೆ ಸಂಬಂಧ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಗಗನ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಮೊಬೈಲ್ ಸ್ವಿಚ್‌ಆಫ್ ಆಗಿದೆ. ಭಾನುವಾರ ಮಧ್ಯಾಹ್ನದಿಂದಲೂ ನಾಪತ್ತೆ ಆಗಿರುವ ಗಗನ್‌ಗಾಗಿ ಹುಡುಕಾಟ ನಡೆದಿದ್ದು, ಈವರೆಗೂ ಸುಳಿವು ಪತ್ತೆ ಆಗಿಲ್ಲ. ಪತ್ತೆಗೆ ಡ್ರೋನ್ ಸಹ ಬಳಕೆ ಮಾಡಲಾಗಿದೆಯಾದರೂ ಇನ್ನೂ ಯುವಕ ಪತ್ತೆ ಆಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ

- Advertisement -

Related news

error: Content is protected !!