- Advertisement -
- Advertisement -
ಬೆಳಗಾವಿ: ಸಿಎಂ ಲಾಕ್ ಡೌನ್ ಘೋಷಣೆ ಮಾಡಿದ ನಂತರವು ವಿಟಿಯು, ಪರೀಕ್ಷೆಗಳನ್ನು ನಡೆಸಿಯೇ ನಡೆಸುತ್ತೇವೆ ಎಂದು ಸುತ್ತೋಲೆ ಹೊರಡಿಸಿತು.
ಇದನ್ನು ಗಮನಿಸಿದ ಎಬಿವಿಪಿ ತಕ್ಷಣ ವಿಟಿಯು ಕುಲಪತಿಗಳ ಬೇಟಿಗೆ ತೆರಳಿದಾಗ, ಎಬಿವಿಪಿ ವಿದ್ಯಾರ್ಥಿಗಳನ್ನು, ಕುಲಪತಿಗಳ ಬೇಟಿಗೆ ಅವಕಾಶ ಕೊಡದ ಕಾರಣ ವಿಟಿಯು ನ ಬಸ್ ಗಳನ್ನು ತಡೆದು ಲಾಕ್ ಡೌನ್ ಕಾರಣ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಪ್ರತಿಭಟನೆ ನಡೆಸಲಾಯಿತು.
ಉನ್ನತ ಶಿಕ್ಷಣ ಸಚಿವರೊಂದಿಗೆ ಹಾಗೂ ವಿಟಿಯು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಲಾಯಿತು.
ನಂತರದಲ್ಲಿ ವಿಟಿಯು ಪರೀಕ್ಷೆಗಳನ್ನು ಮುಂದೂಡಿ ಸುತ್ತೋಲೆಯನ್ನು ಹೊರಡಿಸಿದೆ.
- Advertisement -