Friday, April 26, 2024
spot_imgspot_img
spot_imgspot_img

ವಿಟ್ಲ: ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ 39ನೇ ವರ್ಷದ ನವರಾತ್ರಿ ಮತ್ತು ಶ್ರೀ ಶಾರದೋತ್ಸವ ಸಂಪನ್ನ

- Advertisement -G L Acharya panikkar
- Advertisement -

ಶಾರದಾಂಬ ಭಜನಾ ಮಂಡಳಿ (ರಿ.) ಅಶೋಕನಗರ ಅಳಕೆಮಜಲು ಇದರ ವತಿಯಿಂದ ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ 07-10-2021ನೇ ರಿಂದ 15-10-2021ನೇ ಶುಕ್ರವಾರದ ತನಕ ಒಂಬತ್ತು ದಿನಗಳ ಕಾಲ 39ನೇ ವರ್ಷದ ನವರಾತ್ರಿ ಮತ್ತು ಶ್ರೀ ಶಾರದೋತ್ಸವ ಅದ್ಧೂರಿಯಾಗಿ ಸಂಪನ್ನಗೊ0ಡಿತು.

ಅ. 15 ರಂದು ಗಣಪತಿ ಹವನ, ಧ್ವಜಾರೋಹಣ, ಮೂರ್ತಿ ಪ್ರತಿಷ್ಠೆಯು ಶ್ರೀಧರ ಭಟ್ ಕಬಕ ಇವರ ಪೌರೋಹಿತ್ಯದಲ್ಲಿ ನಡೆಯಿತು. ನಂತರ ಮನೆ ತುಂಬಿಸಲು ತೆನೆ ವಿತರಣೆ ನಡೆಯಿತು. ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು. ಎಲ್ ಕೆ. ಧರಣ್ ಮತ್ತು ಬಳಗ ಮಾಣಿ ಇವರಿಂದ ಹರಿನಾಮ ಸಂಕೀರ್ತನೆ, ಶ್ರೀರಾಮ ಭಜನಾ ಮಂಡಳಿ ಮುಚೂರು, ಕಾನ ಮಂಗಳೂರು ಇವರಿಂದ ಕುಣಿತ ಭಜನೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ವೇಳೆ ನೂರಾರು ಭಕ್ತರ ಸಮ್ಮುಖದಲ್ಲಿ ಕಂಬಳಬೆಟ್ಟುವಿಗೆ ಮೆರವಣಿಗೆ ಬಂದು ಮೂರ್ತಿ ವಿಸರ್ಜನೆ ನಡೆಯಿತು.

- Advertisement -

Related news

error: Content is protected !!