- Advertisement -
- Advertisement -
ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಸಿಬ್ಬಂದಿ ಓರ್ವರು ನಗರದ ಉರ್ವಸ್ಟೋರಿನಲ್ಲಿರುವ ಮೂಡ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಡೀಲ್ ನಿವಾಸಿ ಕೀರ್ತನ್ (35) ಜೀವಾಂತ್ಯ ಮಾಡಿಕೊಂಡ ಸಿಬಂದಿಯಾಗಿದ್ದಾರೆ. ದ್ವೀತೀಯ ದರ್ಜೆಯ ವಿಭಾಗೀಯ ಗುಮಸ್ಥ ರಾಗಿದ್ದ ಕೀರ್ತನ್ ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತಿದ್ದರು ಎನ್ನಲಾಗಿದೆ. ಆರು ತಿಂಗಳು ಅನಾರೋಗ್ಯ ನಿಮಿತ್ತ ರಜೆಯಲ್ಲಿದ್ದ ಕೀರ್ತನ್ ಮೂರು ತಿಂಗಳಿನಿಂದ ಕೆಲಸಕ್ಕೆ ಮರಳಿದ್ದರು.
ಆದರೆ ಅನಾರೋಗ್ಯ ಆಗಾಗ ಬಾಧಿಸುತ್ತಿದ್ದರಿಂದ ಬೇಸತ್ತು ಮಧ್ಯಾಹ್ನ ಹೊತ್ತಿಗೆ ಮೂಡದ ಸ್ಟೋರ್ ರೂಮ್ನಲ್ಲಿ ನೇಣು ಬಿಗಿದು ಜೀವಾಂತ್ಯ ಮಾಡಿಕೊಂಡಿದ್ದಾರೆ. ಮೂಡದ ಸಿಬಂದಿ ಸ್ಟೋರ್ ರೂಮ್ ಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕೀರ್ತನ್ ಶವ ಪತ್ತೆಯಾಗಿದೆ. ಉರ್ವ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
- Advertisement -