- Advertisement -
- Advertisement -
ಪುತ್ತೂರು: ದಿನಾಂಕ 17-04-2021ರಂದು ಗಗನ್,ಜಸ್ಮಿತಾ,ಲಾವಣ್ಯ ಹಾಗೂ ನಿಶಿತಾ ಎಂಬ 4 ಮಕ್ಕಳ ಚಿಕಿತ್ಸಾ ವೆಚ್ಚ ಭರಿಸುವ ಉದ್ದೇಶದಿಂದ ಯುವಶಕ್ತಿ ಕಡೇಶಿವಾಲಯ(ರಿ), ಮಿತೃಸಂಸ್ಥೆಗಳಾದ ಯುವಕೇಸರಿ ಗಡಿಯಾರ ಹಾಗೂ ಯುವಸ್ಪಂದನ ಪೆರ್ನೆ ಇವರ ಆಶ್ರಯದಲ್ಲಿ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ರಥಗದ್ಡೆಯಲ್ಲಿ ನಾಳೆ ಸಂಜೆ 5 ರಿಂದ ರಾತ್ರಿ 12 ರವರೆಗೆ ನಿಧಿ ಸಂಗ್ರಹ ಅಭಿಯಾನ ನಡೆಯಲಿದೆ.
“ಪವನಸುತ ಹನುಮಂತನ” ಬೃಹತ್ಆಕಾರದ ವೇಷ ಕಣ್ಮನ ಸೆಳೆಯಲಿದ್ದು, ಶ್ರೀರಾಮ್ ನಾಸಿಕ್ ಬ್ಯಾಂಡ್ ತಂಡ ಕೈಜೋಡಿಸಲಿದೆ.
ಮಕ್ಕಳ ಚಿಕಿತ್ಸಾ ವೆಚ್ಚಕ್ಕೆ ದಾನಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಬೇಕಾಗಿ ಯುವಶಕ್ತಿ ಕಡೇಶಿವಾಲಯ(ರಿ), ಮಿತೃಸಂಸ್ಥೆಗಳಾದ ಯುವಕೇಸರಿ ಗಡಿಯಾರ ಹಾಗೂ ಯುವಸ್ಪಂದನ ಪೆರ್ನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -