- Advertisement -
- Advertisement -
ಬಂಟ್ವಾಳ : ತಾ:16-01-2023 ರಂದು ಬಾಳ್ತಿಲ ಗ್ರಾಮದ ತೃತೀಯ ಸುತ್ತಿನ – ಗ್ರಾಮ ಸಭೆಯು ಬೆಳಿಗ್ಗೆ ಗಂಟೆ 10:30 ಕ್ಕೆ ಸರಿಯಾಗಿ ಪ್ರಾರಂಭವಾಗಬೇಕಿತ್ತು. ಆದರೆ ತಡವಾಗಿ ಸುಮಾರು 11:00 ಗಂಟೆಗೆ ಗ್ರಾಮ ಸಭೆಯು ಆರಂಭಗೊಂಡಾಗ ಇಲಾಖಾವಾರು ಅಧಿಕಾರಿಗಳು ಬಾರದೆ ಗ್ರಾಮಸಭೆ ಪ್ರಾರಂಭಿಸಿದಕ್ಕೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು.
ಈ ಗ್ರಾಮಸಭೆಗೆ ತುಂಬಾ ಉಪಯುಕ್ತವಾದ ಇಲಾಖೆಗಾರರಾದ ರಾಷ್ಟ್ರೀಯ ಹೆದ್ದಾರಿ. ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಗಳಿಂದ ಯಾವುದೇ ಅಧಿಕಾರಿಗಳು ಬಾರದೇ ಇರುವುದರಿಂದ ಗ್ರಾಮಸಭೆಯನ್ನು ಗ್ರಾಮಸ್ಥರು ಮುಂದೂಡಬೇಕಾಗಿ ಅಧ್ಯಕ್ಷರಾದ ಅಣ್ಣು ಪೂಜಾರಿಯವರಲ್ಲಿ ಗ್ರಾಮಸ್ಥರು ಕೇಳಿಕೊಂಡಾಗ ಗೋಡಲ್ ಅಧಿಕಾರಿಯಾದ ಮುಕುಲ್ ಜೈನ್ ಸಭೆಯನ್ನು ಮುಂದುವರಿಸಲು ಪ್ರಯತ್ನಿಸಿದಾಗ ಗ್ರಾಮಸ್ಥರ ಆಕ್ರೋಶಕ್ಕೆ ಸ್ಪಂದಿಸಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಇರುವ ದಿವಸವೇ ಗ್ರಾಮಸಭೆಯನ್ನು ನಡೆಸಲು ಅಧ್ಯಕ್ಷರು ಒಪ್ಪಿಗೆಯನ್ನು ಸೂಚಿಸಿ ಗ್ರಾಮಸಭೆಯನ್ನು ರದ್ದುಗೊಳಿಸಿದರು.
- Advertisement -