ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ಮಾಡ್ತಿದ್ದ ಸಾರಿಗೆ ನೌಕರರು ಇಂದು ತಮ್ಮ ಮುಷ್ಕರವನ್ನ ಹಿಂಪಡೆಯಲು ಮುಂದಾಗಿದ್ದಾರೆ.
ಸಾರಿಗೆ ನೌಕರರ ಮುಷ್ಕರವನ್ನು ಹಿಂಪಡೆಯುವ ಅಲೋಚನೆ ಮಾಡಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಚರ್ಚೆ ಮಾಡಿ ಈ ಕುರಿತು ಅಂತಿಮ ನಿರ್ಧಾರ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಮುಷ್ಕರದಿಂದ ಜನಸಾಮಾನ್ಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಈ ಚಿಂತನೆ ಮಾಡಿದ್ದೇವೆ. ಫ್ರೀಡಂಪಾರ್ಕ್ನಲ್ಲಿ ನಡಿಯೋ ಉಪವಾಸ ಸತ್ಯಾಗ್ರಹದ ವೇಳೆ ಸಾರಿಗೆ ನೌಕರರ ನಾಯಕರೊಂದಿಗೆ ಮಾತನಾಡುತ್ತೇವೆ. ನಿನ್ನೆ ನಡೆದ ಬೆಳವಣಿಗೆಗಳಲ್ಲಿ ಭಾರೀ ಗೊಂದಲ ಉಂಟಾಗಿದ್ದು. ಇಂದು ಮುಷ್ಕರ ಅಂತಿಮ ಘಟಕ್ಕೆ ಬಂದಿದೆ.
ಸರ್ಕಾರದ ನಿಲುವು ಏನೇ ಇದ್ದರೂ ಜನಸಾಮಾನ್ಯರ ಹಿತದೃಷ್ಟಿಯಿಂದ ಈ ಚಿಂತನೆ ಮಾಡಿದ್ದೇವೆ. ಕಳೆದ 2-3 ದಿನಗಳಿಂದ ಜನರ ಸಮಸ್ಯೆ ನಮ್ಗೆ ಅರ್ಥ ಆಗಿದೆ. ನಮ್ಮ ತೀರ್ಮಾನವನ್ನು ಫ್ರೀಡಂಪಾರ್ಕ್ನಲ್ಲೇ ಘೋಷಣೆ ಮಾಡುತ್ತೇವೆ ಎಂದರು.