Friday, April 26, 2024
spot_imgspot_img
spot_imgspot_img

ಜನಪರ ಚಿಂತನೆ: ಸಾರಿಗೆ ಮುಷ್ಕರ ಹಿಂತೆಗೆತ- ಕೋಡಿಹಳ್ಳಿ ಚಂದ್ರಶೇಖರ್

- Advertisement -G L Acharya panikkar
- Advertisement -

ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ಮಾಡ್ತಿದ್ದ ಸಾರಿಗೆ ನೌಕರರು ಇಂದು ತಮ್ಮ ಮುಷ್ಕರವನ್ನ ಹಿಂಪಡೆಯಲು ಮುಂದಾಗಿದ್ದಾರೆ.

ಸಾರಿಗೆ ನೌಕರರ ಮುಷ್ಕರವನ್ನು ಹಿಂಪಡೆಯುವ ಅಲೋಚನೆ ಮಾಡಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಫ್ರೀಡಂ ಪಾರ್ಕ್​ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಚರ್ಚೆ ಮಾಡಿ ಈ ಕುರಿತು ಅಂತಿಮ ನಿರ್ಧಾರ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಮುಷ್ಕರದಿಂದ ಜನಸಾಮಾನ್ಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಈ ಚಿಂತನೆ ಮಾಡಿದ್ದೇವೆ. ಫ್ರೀಡಂಪಾರ್ಕ್​​​​ನಲ್ಲಿ ನಡಿಯೋ ಉಪವಾಸ ಸತ್ಯಾಗ್ರಹದ ವೇಳೆ ಸಾರಿಗೆ ನೌಕರರ ನಾಯಕರೊಂದಿಗೆ ಮಾತನಾಡುತ್ತೇವೆ. ನಿನ್ನೆ ನಡೆದ ಬೆಳವಣಿಗೆಗಳಲ್ಲಿ ಭಾರೀ ಗೊಂದಲ ಉಂಟಾಗಿದ್ದು. ಇಂದು ಮುಷ್ಕರ ಅಂತಿಮ ಘಟಕ್ಕೆ ಬಂದಿದೆ.

ಸರ್ಕಾರದ ನಿಲುವು ಏನೇ ಇದ್ದರೂ ಜನಸಾಮಾನ್ಯರ ಹಿತದೃಷ್ಟಿಯಿಂದ ಈ ಚಿಂತನೆ ಮಾಡಿದ್ದೇವೆ. ಕಳೆದ 2-3 ದಿನಗಳಿಂದ ಜನರ ಸಮಸ್ಯೆ ನಮ್ಗೆ ಅರ್ಥ ಆಗಿದೆ. ನಮ್ಮ ತೀರ್ಮಾನವನ್ನು ಫ್ರೀಡಂಪಾರ್ಕ್​​​ನಲ್ಲೇ ಘೋಷಣೆ ಮಾಡುತ್ತೇವೆ ಎಂದರು.

- Advertisement -

Related news

error: Content is protected !!