Friday, April 26, 2024
spot_imgspot_img
spot_imgspot_img

ಮನೆ ಬಿಟ್ಟು ಹೋದ ಪತ್ನಿ; ದೇವಸ್ಥಾನದಲ್ಲೇ ಆತ್ಮಹತ್ಯೆಗೆ ಶರಣಾದ ಪತಿ!

- Advertisement -G L Acharya panikkar
- Advertisement -

ಬೆಳಗಾವಿ: ಪತ್ನಿ ತನ್ನನ್ನು ಬಿಟ್ಟು ಹೋದಳೆಂದು ಮನನೊಂದ ಪತಿಯೊಬ್ಬ ದೇವಸ್ಥಾನದಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಅಶೋಕ ಪೂಜೇರಿ (36) . ಹುಕ್ಕೇರಿಯ ಲಕ್ಷ್ಮಿ ಗಲ್ಲಿಯಲ್ಲಿರುವ ಲಕ್ಷ್ಮೀ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದನು.

ದಂಪತಿಗಳ ನಡುವೆ ಮನಸ್ತಾಪವುಂಟಾಗಿ ಬೇಸತ್ತ ಪತ್ನಿ ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದಳು. ಈ ಕಾರಣದಿಂದ ಮನನೊಂದ ಪತಿ ಅಶೋಕ ದೇವಸ್ಥಾನದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಅರ್ಚಕನಿಗೆ ಮೂವರು ಮಕ್ಕಳಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!