Saturday, May 18, 2024
spot_imgspot_img
spot_imgspot_img

ಬೆಳ್ತಂಗಡಿ: ಬಿಲ್‌ ಕಟ್ಟದ ಮನೆಯ ವಿದ್ಯುತ್‌ ಕಡಿತ; ಪವರ್‌ ಮ್ಯಾನ್‌ ತಲೆಗೆ ಸೋಡಾದ ಬಾಟಲಿಯಿಂದ ಹೊಡೆದು ಹಲ್ಲೆ; ಆರೋಪಿ ಅಂದರ್‌

- Advertisement -G L Acharya panikkar
- Advertisement -
astr

ಬೆಳ್ತಂಗಡಿ: ಮನೆಯ ವಿದ್ಯುತ್‌ ಬಿಲ್‌ ಪಾವತಿಸದ ಹಿನ್ನಲೆಯಲ್ಲಿ ಫ್ಯೂಸ್ ತೆಗೆದಿದ್ದ ಕಾರಣಕ್ಕೆ ಲೈನ್ ಮ್ಯಾನ್ ಮೇಲೆ ಧಮ೯ಸ್ಥಳ ಗ್ರಾಮದ ರಿಜೇಶ್ ಮತ್ತೀತರರು ಹಲ್ಲೆ ಮಾಡಿರುವ ಘಟನೆ ಕೊಕ್ಕಡದ ಹತ್ಯಡ್ಕ ಮುದ್ದಿಗೆ ಎಂಬಲ್ಲಿ ನಡೆದಿದೆ.

ಹತ್ಯಡ್ಕ ನಿವಾಸಿ ಕಾಂತು ಪೂಜಾರಿ ಎಂಬವರು ಮನೆಯ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. ಇಲಾಖೆ ಸೂಚನೆಯನ್ವಯ ಕೊಕ್ಕಡದ ಲೈನ್ ಮ್ಯಾನ್ ಉಮೇಶ್ ವಿದ್ಯುತ್ ಬಿಲ್ ಪಾವತಿಸದ ಹಿನ್ನಲೆ ಫ್ಯೂಸ್ ತೆಗೆದಿದ್ದಾರೆ.


ನಂತರ ಸೆ.21ರಂದು ಬಿಲ್ ಪಾವತಿಸಿದ್ದು, ವಿದ್ಯುತ್ ಸಂಪರ್ಕ ನೀಡಲಾಯಿತೆನ್ನಲಾಗಿದೆ. ವಿದ್ಯುತ್ ಸಂಪರ್ಕದ ಫ್ಯೂ ಸ್ ತೆಗೆದ ವಿಚಾರದಲ್ಲಿ ಕಾಂತು ಪೂಜಾರಿಯವರ ಸಂಬಂಧಿ ನಿನ್ನೆ ರಾತ್ರಿ ಕೊಕ್ಕಡದಲ್ಲಿ ಲೈನ್ ಮ್ಯಾನ್ ಉಮೇಶ್ ಅವರನ್ನು ಪ್ರಶ್ನಿಸಿ, ಹಲ್ಲೆಗೆ ಮುಂದಾದಾಗ ಇನ್ನೊಬ್ಬ ಪವರ್ ಮ್ಯಾನ್ ದುಂಡಪ್ಪ ಇದನ್ನು ತಡೆದರೆನ್ನಲಾಗಿದೆ. ಈ ಸಂದರ್ಭ ಪವರ್‌ ಮ್ಯಾನ್‌ ದುಂಡಪ್ಪ ತಲೆಗೆ ಆರೋಪಿಗಳು ಸೋಡಾದ ಬಾಟಲಿನಿಂದ ಹೊಡೆದಿದ್ದಾರೆ.

ತಲೆಗೆ ತೀವ್ರವಾದ ಗಾಯವಾದ ದುಂಡಪ್ಪ ಅವರನ್ನು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಧರ್ಮಸ್ಥಳ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!