Tuesday, April 16, 2024
spot_imgspot_img
spot_imgspot_img

ಗಂಡನಿಗೆ 10 ಲಕ್ಷ ಬೇಕು..! ಮಾವನಿಗೆ ಸುಖ ಬೇಕು..! ಎಫ್.ಐ.ಆರ್ ದಾಖಲು

- Advertisement -G L Acharya panikkar
- Advertisement -

ಬೆಂಗಳೂರು: ವರದಕ್ಷಿಣಿ… ಇದ್ರಿಂದ ಬೇಸತ್ತವರು ಅನೇಕ. ಆಧುನಿಕತೆಗೆ ಹೊಂದಿದ ನಗರಗಳಲ್ಲೂ ಇದು ಇಂದಿಗೂ ಇದೆ ಎಂದರೆ ನಂಬಲೇ ಬೇಕು. ಗಂಡ ಹಾಗೂ ಮಾನವ ಕಿರುಕುಳಕ್ಕೆ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾಳೆ. ಗಂಡ 10 ಲಕ್ಷ ತಂದುಕೊಡುವಂತೆ, ಮಾವ ಲೈಂಗಿಕ ಬಯಕೆ ಈಡೇರಿಸುವಂತೆ ಕಿರುಕುಳ ನೀಡಿರುವುದಾಗಿ ದೂರು ದಾಖಲಾಗಿದೆ.

ಪತಿ 10 ಲಕ್ಷ ರೂಪಾಯಿ ವರದಕ್ಷಿಣೆ ತಂದುಕೊಡುವಂತೆ ಕಿರುಕುಳ ನೀಡಿದ್ದು, ಆತನ ತಂದೆ ಲೈಂಗಿಕ ಬಯಕೆ ಈಡೇರಿಸುವಂತೆ ಕಿರುಕುಳ ನೀಡಿರುವುದಾಗಿ ಮಹಿಳೆಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 24 ವರ್ಷದ ಮಹಿಳೆ ದೂರು ನೀಡಿದ್ದು, ಕೋರಮಂಗಲ ನಿವಾಸಿಯಾಗಿರುವ 31 ವರ್ಷದ ಹರೀಶ್ ಮತ್ತು ಆತನ ತಂದೆ ರಾಮಕೃಷ್ಣ(61) ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. 2016 ರಲ್ಲಿ ಮದುವೆಯಾಗಿದ್ದ ದಂಪತಿ ಮೊದಲಿಗೆ ಅನ್ಯೋನ್ಯವಾಗಿದ್ದರು. ನಂತರದಲ್ಲಿ 10 ಲಕ್ಷ ರೂ. ವರದಕ್ಷಿಣೆ ತಂದುಕೊಡುವಂತೆ ಪತಿ ಜಗಳವಾಡುತ್ತಿದ್ದ.

ಗಂಡನಿಲ್ಲದ ಸಮಯದಲ್ಲಿ ಮಾವ ಆಕೆಯ ಬಳಿ ಬಂದು ನಿನಗೆ ಏನು ಸಹಾಯ ಬೇಕಾದರೂ ಮಾಡಿಕೊಡುತ್ತೇನೆ ನನ್ನ ಆಸೆ ತೀರಿಸು ಎಂದು ಒತ್ತಾಯ ಮಾಡಿದ್ದಾನೆ. ಅಲ್ಲದೆ ಸ್ನಾನ ಮಾಡುವ ಸಂದರ್ಭದಲ್ಲಿ ಬಲವಂತವಾಗಿ ಬಾಗಿಲು ತೆಗೆಸುತ್ತಿದ್ದ, ಕಿಟಕಿಯಲ್ಲಿ ಇಣುಕಿ ನೋಡಿ ಕಿರುಕುಳ ಕೊಡುತ್ತಿದ್ದ. ಬಟ್ಟೆ ಬದಲಿಸುವಾಗ ರೂಮ್ ನೊಳಗೆ ನುಗ್ಗಲು ಯತ್ನಿಸುತ್ತಿದ್ದ ಎಂದು ನೊಂದ ಮಹಿಳೆ ದೂರು ನೀಡಿದ್ದಾಳೆ.

- Advertisement -

Related news

error: Content is protected !!