- Advertisement -
- Advertisement -
ಕಾರ್ಕಳ: ಸ್ಕೂಟಿಗೆ ಬೈಕ್ ಡಿಕ್ಕಿ ಹೊಡೆದಿದ್ದು ಸ್ಕೂಟಿ ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಕಾರ್ಕಳ ನಗರದ ಸರ್ವಜ್ಞ ವೃತ್ತ ಬಳಿ ನಡೆದಿದೆ.
ಸ್ಕೂಟಿ ಸಹ ಸವಾರ ಕುಕ್ಕುಂದೂರು ಗ್ರಾಮದ ನಕ್ರೆ ನಿವಾಸಿ ಜಾರ್ಜ್ ಗಾಯಗೊಂಡ ವ್ಯಕ್ತಿಯಾಗಿದ್ದು, ಸ್ಕೂಟಿ ಸವಾರ ಆಂಟೋನಿ ಹಾಗೂ ಬೈಕ್ ಸವಾರ ವಿಘ್ನೇಶ್ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.
ಡಿಕ್ಕಿಯ ರಭಸಕ್ಕೆ ಬೈಕ್ ಕೆಲವು ಮೀಟರ್ ದೂರಕ್ಕೆ ನೆಗೆದು ಬಿದ್ದಿದೆ. ಘಟನೆಯ ಭೀಕರ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
- Advertisement -