- Advertisement -
- Advertisement -
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದಿನಿ0ದ ಖಾಸಗಿ ಮತ್ತು ಸಿಟಿ ಬಸ್ಗಳ ಓಡಾಟ ಆರಂಭಗೊ0ಡಿದೆ.
ಕೋವಿಡ್ ಲಾಕ್ ಡೌನ್ ಕಾರಣದಿಂದ ಸುಮಾರು 2 ತಿಂಗಳ ಸ್ಥಗಿತಗೊಂಡಿದ್ದ ಬಸ್ ಸೇವೆ ಇಂದಿನಿ0ದ ಆರಂಭಗೊ0ಡಿದ್ದು, ಮೊದಲ ಹಂತದಲ್ಲಿ ಸೀಮಿತ ಸಂಖ್ಯೆಯ ಬಸ್ಗಳು ರಸ್ತೆಗಿಳಿದಿದೆ. ಬಹುತೇಕ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದ ದೃಶ್ಯ ಕಂಡುಬ0ದಿದೆ.
ಸಿಟಿ ಬಸ್ ಗಳು ಹ್ಯಾಮಿಲ್ಟನ್ ವೃತ್ತದಿಂದ ರಾವ್ ಆ್ಯಂಡ್ ರಾವ್ ವೃತ್ತ ರಸ್ತೆಯಲ್ಲಿ ನಿಲ್ಲದೆ ಸರ್ವೀಸ್ ಬಸ್ ನಿಲ್ದಾಣವಾಗಿ ಪ್ರವೇಶ ಪಡೆದಿದ್ದು, ಸ್ಥಳದಲ್ಲಿ ಯಾವುದೇ ಗೊಂದಲ ಉಂಟಾಗಬಾರದು ಎನ್ನುವ ಕಾರಣಕ್ಕೆ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
- Advertisement -