Saturday, April 27, 2024
spot_imgspot_img
spot_imgspot_img

ರಾಜಕೀಯ ಪ್ರವೇಶಿಸುವ ಕುರಿತ ನನ್ನ ನಿರ್ಧಾರವನ್ನು ಆದಷ್ಟು ಶೀಘ್ರವೇ ಪ್ರಕಟಿಸುವೆ-ರಜನಿಕಾಂತ್

- Advertisement -G L Acharya panikkar
- Advertisement -

ಚೆನ್ನೈ: ‘ರಾಜಕೀಯ ಪ್ರವೇಶಿಸುವ ಕುರಿತ ನನ್ನ ನಿರ್ಧಾರವನ್ನು ಆದಷ್ಟು ಶೀಘ್ರವೇ ಪ್ರಕಟಿಸುವೆ’ ಎಂದು ತಮಿಳು ಸೂಪರ್‌ಸ್ಟಾರ್ ನಟ ರಜನಿಕಾಂತ್ ಸೋಮವಾರ ಹೇಳಿದ್ದಾರೆ.

ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಟ ರಜನಿಕಾಂತ್, ‘ರಜನಿ ಮಕ್ಕಳ್ ಮಂದಿರಂ’ನ ಜಿಲ್ಲಾ ಕಾರ್ಯದರ್ಶಿಗಳು ಮತ್ತು ಇತರ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಪದಾಧಿಕಾರಿಗಳೂ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಆದರೆ, ರಾಜಕೀಯ ಸೇರುವ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಲಿಲ್ಲ.

ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಜನಿಕಾಂತ್, ‘ರಜನಿ ಮಕ್ಕಳ್ ಮಂದಿರಂ’ನ ಜಿಲ್ಲಾ ಕಾರ್ಯದರ್ಶಿಗಳನ್ನು ಭೇಟಿಯಾಗಿ ನನ್ನ ರಾಜಕೀಯ ಪ್ರವೇಶದ ಸಾಧ್ಯತೆ ಕುರಿತಾಗಿ ಚರ್ಚಿಸಿದ್ದೇನೆ. ನನ್ನ ನಿರ್ಧಾರ ಏನೇ ಇರಲಿ ಅವರು ನನ್ನೊಂದಿಗೆ ಇದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ನನ್ನ ನಿರ್ಧಾರವನ್ನು ಪ್ರಕಟಿಸುವೆ’ ಎಂದು ತಿಳಿಸಿದರು.

ತಮಿಳುನಾಡಿನಲ್ಲಿ 2021ರ ಏಪ್ರಿಲ್–ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಹಾಗಾಗಿ, ರಜನಿಕಾಂತ್ ರಾಜಕೀಯ ಪ್ರವೇಶ ಕುರಿತು ಚರ್ಚೆಗಳು ಮುನ್ನಲೆಗೆ ಬಂದಿವೆ.

2016ರಲ್ಲಿ ರಜನಿಕಾಂತ್ ಅಮೆರಿಕದಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕೊರೊನಾ ವೈರಸ್ ಸೋಂಕಿನ ಕಾರಣಕ್ಕಾಗಿ ರಜನಿ, ರಾಜಕೀಯ ಪ್ರವೇಶ ಸಲ್ಲದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

- Advertisement -

Related news

error: Content is protected !!