Saturday, August 8, 2026
spot_imgspot_img
spot_imgspot_img

ಪುತ್ತೂರು: ತೋಡಿನಲ್ಲಿ ಮಹಿಳೆಯ ಮೃತದೇಹ ಪತ್ತೆ ಪ್ರಕರಣ:

- Advertisement -
- Advertisement -

ಕೊನೆಗೂ ನಾಪತ್ತೆಯಾದ ಬಾವ ಬಂದರು!

ಕೆದಿಲ ವಳಂಕುಮೇರಿ ನಿವಾಸಿ ಗಣಪತಿ ಯಾನೆ ರಾಮಣ್ಣ ಗೌಡ ಅವರ ಪತ್ನಿ ಮಮತಾ ಅವರ ಮೃತದೇಹ ಆ.6 ರಂದು ಕೆದಿಲ ಗ್ರಾಮದ ಕಾಂತುಕೋಡಿ ಮಳೆ ನೀರು ಹರಿಯುವ ತೋಡಿನಲ್ಲಿ ಪತ್ತೆಯಾಗಿತ್ತು. ಆದರೆ ಅದೇ ದಿನ ರಾಮಣ್ಣ ಗೌಡ ಅವರ ಅಣ್ಣ ಸುಂದರ ಯಾನೆ ಲೋಕಯ್ಯ ಗೌಡ ಅವರು ನಾಪತ್ತೆಯಾಗಿದ್ದರು.

ಮಮತಾ ಅವರ ಸಾವಿನ ಮೇಲೆ ಶಂಕೆ ವ್ಯಕ್ತಪಡಿಸಿ ಲೋಕಯ್ಯ ಯಾನೆ ಸುಂದರ ಕೊಲೆ ಮಾಡಿರುವುದಾಗಿ ಆರೋಪಿಸಿ ಮಮತಾ ಅವರ ಪತಿ ಗಣಪತಿ ಯಾನೆ ರಾಮಣ್ಣ ಗೌಡ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯ ಪತ್ತೆ ಆರಂಭಿಸಿದ್ದರು. ಆದರೆ ಲೋಕಯ್ಯ ಗೌಡ ಅವರು ಪತ್ತೆಯಾಗಿರಲಿಲ್ಲ.ಇದೀಗ ದಿಡೀರ್ ಎಂದು ಆ.10 ರಂದು ಬೆಳಗ್ಗೆ ಲೋಕಯ್ಯ ಗೌಡ ಅವರು ತನ್ನ ಮನೆಯ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಅವರನ್ನು ನೋಡಿ ಮನೆ ಮಂದಿ ಮಮತಾ ಅವರ ಕೊಲೆ ನಡೆದಿರುವ ಕುರಿತು ವಿಚಾರಿಸುತ್ತಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆಂದು ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!