ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ ಕಳೆದ 50 ವರ್ಷಗಳಿಂದ ಬಹಳ ವಿಜೃಂಭಣೆಯಿಂದ ನಡೆದು ಬರುತ್ತಿರುವ ಬಂದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಧರ್ಮನಗರ, ಕಂಬಳಬೆಟ್ಟು ಇದರ ನೂತನ ಸಮಿತಿ ರಚನೆ ನಡೆಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ರಾಘವ ಮಂಜಪ್ಪಲು, ಉಪಾಧ್ಯಕ್ಷರಾಗಿ ಜಗದೀಶ್ ಅಮೈ, ಲಕ್ಷ್ಮೀ ಉರಿಮಜಲು, ಕಾರ್ಯದರ್ಶಿ ಹರೀಶ್ ಉರಿಮಜಲು, ಜತೆಕಾರ್ಯದರ್ಶಿ ಜಗದೀಶ ನೂಜಿ, ಕೋಶಾಧಿಕಾರಿ ಸುಂದರ ಧರ್ಮನಗರ ಇವರನ್ನು ಆಯ್ಕೆ ಮಾಡಲಾಯಿತು.
ವರ್ಷಪ್ರತಿ 3 ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯುವ ಇಲ್ಲಿನ ಗಣೇಶೋತ್ಸವ ಕಾರ್ಯಕ್ರಮವು 25 ನೇ ವರ್ಷಚಾರಣೆಯಲ್ಲಿ 5 ದಿನಗಳ ಕಾಲ ಬಹಳ ಅದ್ದೂರಿಯಾಗಿ ಗಣೇಶೋತ್ಸವವನ್ನು ನಡೆಸಲಾಗಿತ್ತು.
ಆದರೆ ಕಳೆದ ಬಾರಿ 50 ನೇ ವರ್ಷಚಾರಣೆಯ ಸಲುವಾಗಿ ಗಣೇಶೋತ್ಸವ ಕಾರ್ಯಕ್ರಮ ವನ್ನು ಬಹಳ ವಿಜೃಂಭಣೆಯಿಂದ ನಡೆಸಬೇಕೆಂದು ಆಯೋಜಿಸಲಾಗಿತ್ತು.
ಆದರೆ ಕೊರೋನ ಮಹಾಮಾರಿಯಿಂದ ಸರಳ ರೀತಿಯಲ್ಲಿ ನಡೆಸಲಾಗಿತ್ತು.
ಸಾರ್ವಜನಿಕ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟು ಇವರು ಆಯೋಜನೆ ಮಾಡುವ ಈ ಗಣೇಶೋತ್ಸವ ಕಾರ್ಯಕ್ರಮವನ್ನು ಧಾರ್ಮಿಕ ಪೂಜಾ ವಿಧಿವಿದಾನಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ , ಆಟೋಟ ಸ್ಪರ್ಧೆಗಳು, ಕಬಡ್ಡಿ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ.