Thursday, May 2, 2024
spot_imgspot_img
spot_imgspot_img

ವಿಟ್ಲ: ಕಳೆದು ಹೋದ ಕರಿಮಣಿ ಸರವನ್ನು ವಾರಿಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

- Advertisement -G L Acharya panikkar
- Advertisement -

ವಿಟ್ಲ: ಕಳೆದು ಹೋದ ಚಿನ್ನದ ಕರಿಮಣಿ ಸರವನ್ನು ವ್ಯಕ್ತಿಯೊಬ್ಬರು ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಘಟನೆ ನಡೆದಿದೆ. ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಮರುವಾಳದ ಪೂವಪ್ಪ ಎಂಬವರಿಗೆ ಬದನಾಜೆ ಎಂಬಲ್ಲಿ ಚಿನ್ನದ ಕರಿಮಣಿ ಸಿಕ್ಕಿದೆ. ಕೂಡಲೇ ಸರ ಚಿನ್ನದ್ದೋ ಎಂಬುವುದನ್ನು ಖಚಿತಪಡಿಸಿ ಆ ಬಳಿಕ ವಾಟ್ಸಾಪ್‌ ಗ್ರೂಪ್‌‌ಗಳಲ್ಲಿ ಹೀಗೊಂದು ಚಿನ್ನದ ಕರಿಮಣಿ ಸರ ಸಿಕ್ಕಿರುವುದಾಗಿ ಸಂದೇಶ ರವಾನಿಸಿದ್ದಾರೆ.

ಚಿನ್ನದ ಕರಿಮಣಿ ಸರದ ವಾರಿಸುದಾರರು ಈ ವಿಷಯ ತಿಳಿದು ಪೂವಪ್ಪ ಎಂಬವರನ್ನು ಸಂಪರ್ಕಿಸಿದ್ದಾರೆ. ಆ ಬಳಿಕ ವಾರಿಸುದಾರರು ಜಯಲಕ್ಷ್ಮಿ ನೂಜಿ ಎಂಬರಿಗೆ ಕರಿಮಣಿ ಸರ ಹಸ್ತಾಂತರ ಮಾಡಿದ್ದು, ಈ ಉತ್ತಮ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಪೂವಪ್ಪ ಎಂಬವರು ವಿಟ್ಲದ ಜನಾರ್ದನ ಪೈ ದಿನಸಿ ಅಂಗಡಿಯಲ್ಲಿ ಡ್ರೈವರ್‍ ಆಗಿ ಕೆಲಸ ಮಾಡುತ್ತಿದ್ದಾರೆ.

- Advertisement -

Related news

error: Content is protected !!