ಕರ್ನಾಟಕವು ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ದೊಡ್ಡ ಪ್ರಮಾಣದ ದುಡಿಯುವ ಜನಸಂಖ್ಯೆಯನ್ನು ಹೊಂದಿರುವ ಪ್ರಮುಖ ರಾಜ್ಯವಾಗಿದೆ. ರಾಜ್ಯದಲ್ಲಿನ ಚಟುವಟಿಕೆಗಳನ್ನು ಬಲಪಡಿಸಲು ಮತ್ತು ವಿಸ್ತರಿಸಲು ಹಾಗೂ ಎಲ್ಲಾ ಪ್ರದೇಶಗಳಲ್ಲಿ ವರ್ಗ ಕ್ಷಣದಲ್ಲಿ ಕೆಲಸವನ್ನು ಸಂಘಟಿಸುವ ಕಾರ್ಯವನ್ನು INTUC (Indian National Trade Union Congress) ಮಾಡುತ್ತಿದ್ದು, INTUC ಇದರ ರಾಜ್ಯಾಧ್ಯಕ್ಷರಾಗಿ ಡಿ ಲಕ್ಷ್ಮಿ ವೆಂಕಟೇಶ್ ಅವರನ್ನು ನೇಮಕ ಮಾಡಲಾಯಿತು.
ಈ ಹಿಂದೆ INTUC ರಾಜ್ಯಾಧ್ಯಕ್ಷರಾಗಿ SRI S S ಪ್ರಕಾಶಂ ಕಾರ್ಯನಿರ್ವಹಿಸುತ್ತಾ ಇದ್ದರು. ಇದೀಗ ಇವರ ಆಡಳಿತಾವಧಿ ಮುಕ್ತಾಯಗೊಂಡಿದ್ದು ಈ ಹಿನ್ನಲೆ ನೂತನ ರಾಜ್ಯಾಧ್ಯಕ್ಷರಾಗಿ ಡಿ ಲಕ್ಷ್ಮಿ ವೆಂಕಟೇಶ್ರವರನ್ನು ಆಯ್ಕೆ ಮಾಡಲಾಯಿತು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನಂತರದ ದಿನಗಳಲ್ಲಿ ಅವರ ನಿಷ್ಠೆ ಬೆಳವಣಿಗೆಯನ್ನು ಕಂಡ ಪಕ್ಷ ಅನೇಕ ಜವಾಬ್ದಾರಿಗಳನ್ನು ನೀಡಿದೆ. ಕಾಂಗ್ರೆಸ್ನ ವಿವಿಧ ಹುದ್ದೆಗಳ ಜವಾಬ್ದಾರಿಯನ್ನು ನಿಭಾಯಿಸಿದ ಲಕ್ಷ್ಮಿ ವೆಂಕಟೇಶ್ ಅವರು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅನೇಕ ಕ್ಷೇತ್ರಗಳಲ್ಲಿ ಉಸ್ತುವಾರಿಯಾಗಿ ತನ್ನ ಕರ್ತವ್ಯ ನಿರ್ವಹಿಸಿದ್ದರು.
ಪಕ್ಷ ನೀಡಿದ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿ ಶಕ್ತಿಗೆ ತಕ್ಕಂತೆ ದುಡಿದ ಇವರು ಕಳೆದ ಬಾರಿ ಬೆಂಗಳೂರು ಮಹಾನಗರಪಾಲಿಕೆಯ ಚುಣಾವಣೆಯಲ್ಲಿ ಟಿಕಿಟ್ ಪಡೆಯಲು ಯಶಸ್ವಿಯಾಗಿದ್ದರು.
ಅನೇಕ ಬಲಿಷ್ಠ ಘಟಾನುಘಟಿಗಳ ನಡುವೆ ಪಕ್ಷ ನಿಷ್ಠೆಯಿಂದ ದುಡಿದ ಲಕ್ಷ್ಮಿ ವೆಂಕಟೇಶ್ರವರಿಗೆ ರಾಜ್ಯಾಧ್ಯಕ್ಷರಾಗಿ ಸಿಕ್ಕಿದ ಈ ಗೌರವ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ.