- Advertisement -
- Advertisement -
ಕಾಸರಗೋಡು: ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಯಾರೋ ಕಳ್ಳರು ಸುಮಾರು 15 ಲಕ್ಷ ರೂ.ಯ ಚಿನ್ನಾಭರಣ ಕಳವುಗೈದ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಚೇಡಿಯಡ್ಕ ದಲ್ಲಿ ನಡೆದಿದೆ.
ಚೇಡಿಕ್ಕಾನದ ಮುಹಮ್ಮದ್ ಶಾಫಿ ಎಂಬವರ ಮನೆಯ ಅಡುಗೆ ಕೋಣೆಯ ಬಾಗಿಲು ಮುರಿದು ಮನೆಯ ಒಳಗೆ ನುಗ್ಗಿರುವ ಕಳ್ಳರು ಕಪಾಟನ್ನು ತೆರೆದು ಸುಮಾರು15 ಲಕ್ಷ ರೂ.ಯ ಚಿನ್ನಾಭರಣ ಕಳವು ಮಾಡಿದ್ದಾರೆ.
ಮನೆಯವರು ಸಂಬಂಧಿಕರ ಮನೆಗೆ ತೆರಳಿ ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಸಮೀಪದ ಕಲಂದರ್ ಹಾಗೂ ಅಬ್ದುಲ್ ಖಾದರ್ ರವರ ಮನೆಗೆ ನುಗ್ಗಿದ್ದು , ಮನೆಯವರು ಗಲ್ಫ್ ನಲ್ಲಿದ್ದು , ಕಳವಾದ ಸೊತ್ತುಗಳ ಬಗ್ಗೆ ಮಾಹಿತಿ ಲಭಿಸಿಲ್ಲ . ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
- Advertisement -