Friday, May 3, 2024
spot_imgspot_img
spot_imgspot_img

ಕಡಬ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ….!

- Advertisement -G L Acharya panikkar
- Advertisement -

ಕಡಬ: ಕಾಣಿಯೂರು ಸಮೀಪದ ಚಾರ್ವಾಕ ಗ್ರಾಮದ ಆತಾಜೆ ಮೇದಪ್ಪ ಗೌಡ (48 ವ.)ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಜ.17ರಂದು ರಂದು ಬೆಳಗ್ಗೆ ಮೇದಪ್ಪ ಗೌಡರ ಅಣ್ಣನ ಪತ್ನಿ ಹೂ ಹೆಕ್ಕಲು ಹೋಗಿದ್ದು ಹೂ ಹೆಕ್ಕಿಕೊಂಡು ಮನೆಗೆ ಬಂದಾಗ ಮನೆಯಲ್ಲಿ ಮೇದಪ್ಪ ಗೌಡರು ಇಲ್ಲದೇ ಇದ್ದು ನಂತರ ಮೇದಪ್ಪ ಗೌಡರವರ ಮೊಬೈಲ್‌ಗೆ ಕರೆ ಮಾಡಿದಾಗ ಮೊಬೈಲ್ ಕರೆ ಸ್ವೀಕರಿಸಲಿಲ್ಲ.

ಬಳಿಕ ಮನೆಯ ಸುತ್ತಮುತ್ತ ಹುಡುಕಾಡಿದಾಗ ಮೇದಪ್ಪ ಗೌಡರು ಮನೆಯ ಹತ್ತಿರ ಸುಮಾರು 50 ಮೀಟರ್ ದೂರದಲ್ಲಿರುವ ತೋಟದಲ್ಲಿ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದುದಾಗಿ ತಿಳಿದು ಬಂದಿದೆ.

‘ನನ್ನ ದೊಡ್ಡಪ್ಪನ ಮಗನಾದ ಮೇದಪ್ಪ ಗೌಡರವರು ತನ್ನ ಅಣ್ಣನ ಪತ್ನಿ ಮತ್ತು ಮಗಳೊಂದಿಗೆ ವಾಸವಾಗಿರುವುದಾಗಿ ಆತಾಜೆ ಬಾಲಕೃಷ್ಣ ಗೌಡ ಅವರು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!