- Advertisement -
- Advertisement -






ವಿಟ್ಲ ಮೂಡ್ನೂರು ಗ್ರಾಮದ ಅಮೈ-ಪಣೆಮಜಲು ಇಲ್ಲಿ ಎಪ್ರಿಲ್ 19 ಆದಿತ್ಯವಾರ ಮತ್ತು ಎಪ್ರಿಲ್ 21 ಮಂಗಳವಾರದಂದು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳಿಗೆ ಕಾಲಾವಧಿ ನೇಮೋತ್ಸವ ನಡೆಯಲಿದೆ.
ಎಪ್ರಿಲ್ 19 ಆದಿತ್ಯವಾರದಂದು ನೂಜಿಯಲ್ಲಿ ನೇಮೋತ್ಸವ ನಡೆಯಲಿದೆ, ಸಂಜೆ ಗಂಟೆ 5ಕ್ಕೆ ಅಮೈ ಭಂಡಾರ ಮನೆಯಿಂದ ಭಂಡಾರ ತೆಗೆಯುವುದು, ಸಂಜೆ ಗಂಟೆ 6.30ಕ್ಕೆ ಚೆಂಡಾಟ, ರಾತ್ರಿ ಗಂಟೆ 8 ಕ್ಕೆ ಧೂಮಾವತಿ ದೈವದ ಓಲಸರಿ ನಡೆಯುವುದು, ನಂತರ ಅನ್ನಸಂತರ್ಪಣೆ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಎಪ್ರಿಲ್ 21 ಮಂಗಳವಾರದಂದು ಪಣೆಮಜಲು ಮಂಜಿಕೋಡಿಯಲ್ಲಿ ನೇಮೋತ್ಸವ, ಸಂಜೆ ಗಂಟೆ 5 ಕ್ಕೆ ಅಮೈ ಭಂಡಾರ ಮನೆಯಿಂದ ಭಂಡಾರ ತೆಗೆಯುವುದು, ರಾತ್ರಿ ಗಂಟೆ 8 ಕ್ಕೆ ಶ್ರೀ ಧೂಮಾವತಿ ದೈವದ ನೇಮೋತ್ಸವ ನಂತರ ಅನ್ನಸಂತರ್ಪಣೆ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.
- Advertisement -








