Monday, May 6, 2024
spot_imgspot_img
spot_imgspot_img

ಕಾರ್ಕಳ: ಖಿನ್ನತೆಯಿಂದ ಬಳಲುತಿದ್ದ ಯುವಕ ನಾಪತ್ತೆ..!

- Advertisement -G L Acharya panikkar
- Advertisement -

ಕಾರ್ಕಳ: ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ಯುವಕನೊಬ್ಬ ಕಾಣೆಯಾದ ಘಟನೆ ಕಾರ್ಕಳದ ಪೊತ್ತೊಂಜಿಕಟ್ಟೆ ಗುಂಡ್ಯಾ ಮನೆ ಎಂಬಲ್ಲಿ ನಡೆದಿದೆ. ಪ್ರಸಾದ (25) ನಾಪತ್ತೆಯಾದ ಯುವಕ.

4 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಸೆ.16 ರ ಬೆಳಗ್ಗೆ, ನೋಡಿದಾಗ ಮನೆಯ ಬಾಗಿಲು ತೆರೆದಿದ್ದು ಮಲಗಿಕೊಂಡಿದ್ದ ಮಗ ಪ್ರಸಾದನು ಮನೆಯಲ್ಲಿ ಇಲ್ಲದೇ ಇದ್ದು ಸಂಬಂಧಿಕರ ಮನೆಯಲ್ಲಿ ಹಾಗೂ ನೆರೆಹೊರೆಯಲ್ಲಿ ಹುಡುಕಾಡಿದರು ಪತ್ತೆಯಾಗದೇ ಇರುವುದರಿಂದ ಠಾಣೆಗೆ ದೂರುನೀಡಿದ್ದಾರೆ.

ಕಾಣೆಯಾದವರ ಚಹರೆ ಗುರುತು: ಎತ್ತರ: ಸುಮಾರು 5 ಅಡಿ 7 ಇಂಚು ಗೋಧಿ ಮೈಬಣ್ಣ, ಬಟ್ಟೆಗಳು: ಆಕಾಶ ನೀಲಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಭಾಷೆ: ಕನ್ನಡ ತುಳು ಮಾತನಾಡುತ್ತಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!