ವಿಟ್ಲ: ಕೆಲಿಂಜ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ, ಮಕ್ಕಳ ಪ್ರತಿಭಾ ಪುರಸ್ಕಾರ, ಕೆ.ಜಿ ಮಕ್ಕಳ ಅಭಿಯಾನ ಕಾರ್ಯಕ್ರಮ, 1ರಿಂದ 8ನೇ ತರಗತಿಗೆ ಸ್ಪೋಕನ್ ಇಂಗ್ಲೀಷ್ ಕಾರ್ಯಕ್ರಮ ಉದ್ಘಾಟನೆಯು ಎ.8ರಂದು ಕೆಲಿಂಜ ಶಾಲಾ ರಂಗಮಂಟಪದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಲಿಂಜ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲತ್ತಡ್ಕ ವಹಿಸಿದರು. ಮುಖ್ಯ ಅತಿಥಿಗಳಾಗಿ ಕಲ್ಲಡ್ಕ ಮತ್ತು ಕಂಬಳಬೆಟ್ಟು ಕ್ಲಸ್ಟರ್ ಸಿ.ಆರ್.ಪಿ ಜ್ಯೋತಿ, ನಿವೃತ್ತ ಸಹ ಶಿಕ್ಷಕ ಬಾಬು ಗೌಡ, ಹಳೆ ವಿದ್ಯಾರ್ಥಿ ಡಾ| ರವಿಕಿರಣ್ ಭಟ್ ಮೊಗಸಾಲೆ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಸುದೇಶ್ ಭಂಡಾರಿ, ಟ್ಲ ಜೇಸಿಐ ಅಧ್ಯಕ್ಷ ಜೇಸಿ ಪರಮೇಶ್ವರ ಹೆಗ್ಗಡೆ ಭಾಗವಹಿಸಿದರು.
ನಾರಾಯಣ ಭಟ್ ಪುಂಡಿಕಾೈ , ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಎನ್.ಹಮೀದ್ ಜಿ.ಎಸ್, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಸೀನಾಜೆ, ಕೋಶಾಧಿಕಾರಿ ದೇವಪ್ಪ ಗೌಡ, ಜೊತೆ ಕಾರ್ಯದರ್ಶಿ ಮೋಹಿತ್ ಶೆಟ್ಟಿ, ಗೌರವ ಸಲಹೆಗಾರ ಹಮೀದ್ ಗುಳಿಗದ್ದೆ, ಎಸ್ಡಿಎಂಸಿ ಅಧ್ಯಕ್ಷೆ ಜಯಂತಿ, ಮಾಜಿ ಎಸ್ಡಿಎಂಸಿ ಅಧ್ಯಕ್ಷ ಹೊನ್ನಪ್ಪ, ಹಳೆವಿದ್ಯಾರ್ಥಿ ಚಿತ್ತರಂಜನ್, ಕ್ಯಾಪ್ಟನ್ ದಾಸಪ್ಪ ನೆಕ್ಕಿಲಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಮಂಜುಳಾ ನಿರೂಪಿಸಿ, ಮುಖ್ಯ ಶಿಕ್ಷಕ ಬಿ.ತಿಮ್ಮಪ್ಪ ನಾಯ್ಕ ಸ್ವಾಗತಿಸಿದರು.ಸಹಶಿಕ್ಷಕಿ ಉಷಾ ಸುವರ್ಣ ಧನ್ಯವಾದವಿತ್ತರು. ಸಹಶಿಕ್ಷಕಿಯರಾದ ಗಾಯತ್ರಿದೇವಿ, ನಳಿನಾಕ್ಷಿ, ಪ್ರಣೀತಾ ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕೆಲಿಂಜ ಮತ್ತು ಮಂಗಲಪದವು ಅಂಗನವಾಡಿ ಮಕ್ಕಳಿಂದ ಹಾಗೂ ಕೆಲಿಂಜ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.