- Advertisement -
- Advertisement -
ಕುಂಡಡ್ಕ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ ರಿ. ವಿಷ್ಣುನಗರ ಇದರ ಸ್ನೇಹಬಂಧು ಸಹಾಯನಿಧಿ ಯೋಜನೆಯ ಒಂಬತ್ತನೆಯ ಯೋಜನೆಯಲ್ಲಿ ಶಶಿಧರ ಕಂಪ ಮತ್ತು ವನರಾಜ ಆಚಾರ್ಯ ಕಂಬಳಬೆಟ್ಟು ಇವರಿಗೆ ಹಣವನ್ನು ನೀಡಲಾಯಿತು.
ಶಶಿಧರ ಕಂಪ ರವರಿಗೆ 20,000- ರೂ ಮೊತ್ತದ ಚೆಕ್ ಮತ್ತು ವನರಾಜ ಆಚಾರ್ಯ ಕಂಬಳಬೆಟ್ಟು ಇವರಿಗೆ 10,000-ರೂ ಮೊತ್ತದ ಚೆಕ್ ನ್ನು ಶ್ರೀ ಹರಿಕೃಷ್ಣ ಬಂಟ್ವಾಳ (ಅಧ್ಯಕ್ಷರು, ಕಿಯೋನಿಕ್ಸ್ – ಕರ್ನಾಟಕ ಸರ್ಕಾರ) ಇವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಯೋಗೀಶ್ ಕುಡ್ವ, ಶ್ರೀ ಕೇಶವ ಎ, ಶ್ರೀ ಎಂ. ಸುಧೀರ್ ಕುಮಾರ್ ಶೆಟ್ಟಿ, ಶ್ರೀ ಜಯಪ್ರಕಾಶ್ ನಾಯಕ್ ಎನ್, ಶ್ರೀ ರಾಧಾಕೃಷ್ಣ ಕಂಪ ಮತ್ತು ಶ್ರೀ ವಿಷ್ಣುಮೂರ್ತಿ ಯುವಕವೃಂದದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿರದ್ದರು.
- Advertisement -