ಅತ್ತಿಗೆಯನ್ನು ಭೇಟಿ ಮಾಡಲು ಮನೆಗೆ ನುಗ್ಗಿದ್ದ ಆಕೆಯ ಪ್ರಿಯಕರನನ್ನು ಆಕೆಯ ಮೈದುನ ರಾಡ್ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಅಂಜಿನಪ್ಪ ಪೈಂಟರ್ (40) , ಅತ್ತಿಗೆ ಆಶಾ ಹಾಗೂ ಮೈದುನ ರಾಘವೇಂದ್ರ ಎಂದು ಗುರುತಿಸಲಾಗಿದೆ.
ಆಶಾಳಿಗೆ ಮದುವೆಯಾಗಿತ್ತು. ಆದರೂ ಅಂಜನಪ್ಪ ಹಾಗೂ ಆಶಾಳಿಗೆ ಕಳೆದ 1 ವರ್ಷದಿಂದ ಸಂಬಂಧವಿತ್ತು. ಈ ಹಿನ್ನೆಲೆಯಲ್ಲಿ ಆಶಾಳನ್ನು ಭೇಟಿ ಮಾಡಲು ಅಂಜನಪ್ಪ ಮನೆಗೆ ಹೋಗಿದ್ದ. ಆದರೆ ಆಶಾ ಅಂಜನಪ್ಪನನ್ನು ಅವೈಡ್ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಆಶಾ ತನ್ನ ಗಂಡನಿಗೆ ಕರೆ ಮಾಡುವುದಾಗಿ ಹೇಳಿದಾಗ ಅಂಜನಪ್ಪ ಆಕೆಯ ಫೋನ್ ಕಸಿದುಕೊಂಡು ಒಡೆದು ಹಾಕಿದ್ದ. ಹೀಗಾಗಿ ಆಶಾ ಬೇರೆಯವರ ಫೋನ್ ಮೂಲಕ ಮೈದುನ ರಾಘವೇಂದ್ರಗೆ ಕರೆ ಮಾಡಿ ತಿಳಿಸಿದ್ದಳು.
ಮನೆಗೆ ಬಂದ ಮೈದುನ ರಾಘವೇಂದ್ರ ಹಾಗೂ ಅಂಜನಪ್ಪನ ನಡುವೆ ಜಗಳ ನಡೆದಿದೆ. ಗಲಾಟೆಯಲ್ಲಿ ರಾಘವೇಂದ್ರ ಅಂಜನಪ್ಪನ ತಲೆಗೆ ರಾಡ್ನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಶಾ ಹಾಗೂ ರಾಘವೇಂದ್ರ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.