Thursday, April 25, 2024
spot_imgspot_img
spot_imgspot_img

ಮಂಗಳಪದವು: ಒಕ್ಕೆತ್ತೂರು ಶ್ರೀ ಮಲರಾಯಿ ದ್ಯೆವಸ್ಧಾನದ ನೇಮ ಮತ್ತು ಬಂಡಿ ಉತ್ಸವ

- Advertisement -G L Acharya panikkar
- Advertisement -

ಮಂಗಳಪದವು: ಒಕ್ಕೆತ್ತೂರು ಶ್ರೀ ಮಲರಾಯಿ ದೈವಸ್ಧಾನದಲ್ಲಿ ದಿನಾಂಕ 13-04-2021ನೇ ಮಂಗಳವಾರದಿಂದ ತಾ17-04-2021ನೇ ಶನಿವಾರದವರೆಗೆ ಕಾಲಾವಧಿ ಪ್ರಕಾರ 5 ದಿನಗಳ ಕಾಲ ನೇಮ ಮತ್ತು ಬಂಡಿ ಉತ್ಸವ ಜರಗಲಿದೆ.

ತಾ.13-04-2021ನೇ ಮಂಗಳವಾರ ರಾತ್ರಿ ಗಂಟೆ 10.30ಕ್ಕೆ; ಕೋಚೋಡಿ ಭಂಡಾರದ ಮನೆಯಿಂದ ಒಕ್ಕೆತ್ತೂರು ಸ್ಧಾನಕ್ಕೆ ದೈವಗಳ ಭಂಡಾರ ಬರುವುದು ಹಾಗೂ ಧ್ವಜಾರೋಹಣ ನೆರವೆರಲಿದೆ.

ತಾ. 14-04-2021ನೇ ಬುಧವಾರ ಬೆಳಗ್ಗೆ ; ವಿಷು ಕಣಿ. ರಾತ್ರಿ ಕೊಟ್ಯದಾಯನ ನಡೆಯಲಿದೆ.
ತಾ. 15-04-2021ನೇ ಗುರುವಾರ ರಾತ್ರಿ ಗಂಟೆ 10.30ಕ್ಕೆ ; ಉಳ್ಳಾಲ್ತಿ ಮೆಚ್ಚಿ ಜಾತ್ರೆಯು ನಡೆಯಲಿದೆ.
ತಾ.16-04-2021ನೇ ಶುಕ್ರವಾರ ಬೆಳಗ್ಗೆ 10.00 ಗಂಟೆಗೆ ಮಲರಾಯಿ ದೈವದ ನೇಮ ನಡೆಯಲಿದೆ. ರಾತ್ರಿ ಗಂಟೆ 10ಕ್ಕೆ ಸರಿಯಾಗಿ ಮಾಗಣಿ ಬಂಡಿ ಉತ್ಸವ ಜರಗಲಿದೆ.

ತಾ.17-04-2021ನೇ ಶನಿವಾರ ಬೆಳಗ್ಗೆ 10.00 ಗಂಟೆಗೆ ಶ್ರೀ ಮಲರಾಯಿ ದೈವದ ಹರಕೆ ನೇಮ ನಡೆಯುವುದು ಹಾಗೆಯೆ ಮಧ್ಯಾಹ್ನ 12-00 ಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 11-00 ಗಂಟೆಗೆ ದೈವಗಳ ಒಲಸರಿ ಜಾತ್ರೆ ಕಡೇಬಂಡಿ ಉತ್ಸವ ಜರಗಲಿದೆ.

ಭಕ್ತಭಿಮಾನಿಗಳು ಈ ಜಾತ್ರೋತ್ಸವದಲ್ಲಿ ಪಾಲ್ಗೊಂಡು ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ ಬಂಗಾರು ಅರಸರು, ವಿಟ್ಲ ಅರಮನೆ ಆಡಳಿತ ಮೊಕ್ತೇಸರರು ಹಾಗೂ ಗ್ರಾಮ ಗುರಿಕಾರರು ಮತ್ತು ಊರ ಹತ್ತು ಸಮಸ್ತರು.

- Advertisement -

Related news

error: Content is protected !!