- Advertisement -
- Advertisement -
ಮಂಗಳೂರು:-ದಕ್ಷಿಣಕನ್ನಡ, ಉಡುಪಿ, ಕೊಡಗು, ಕಾಸರಗೋಡು, ಜಿಲ್ಲೆಗಳನ್ನೊಳಗೊಂಡ ರಾಜಕೀಯ ಪ್ರಮುಖ ನಿರ್ಣಯ ಗಳನ್ನುತೆಗೆದು ಕೊಳ್ಳವ ಮಂಗಳೂರು ವಿಭಾಗ ಕಾರ್ಯವಾಹರಾಗಿರುವ ಸುಳ್ಯದ ನಾ.ಸೀತಾರಾಮರನ್ನು ಕರ್ನಾಟಕದ ದಕ್ಷಿಣ ಪ್ರಾಂತ ಪ್ರಮುಖ್ ಜವಾಬ್ದಾರಿಗೆ ನಿಯುಕ್ತಿಗೊಳಿಸಲಾಗಿದೆ.
ನಾ.ಸೀತಾರಾಮ ಜಾಗಕ್ಕೆ ಈ ಹಿಂದೆ ವಿಭಾಗ ಸಹಕಾರ್ಯವಾಹರಾಗಿದ್ದ ಉಡುಪಿ ಮೂಲದ ವಾದಿರಾಜ ರನ್ನು ನಿಯುಕ್ತಿಗೊಳಿಸಲಾಗಿದೆ.ಸೇವಾ ವಿಭಾಗದಲ್ಲಿ ಸೇವಾಭಾರತಿ , ವನವಾಸಿ ಕಲ್ಯಾಣ ಮುಂತಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇವಾ ವಲಯಗಳಿದ್ದು , ಇದು ರಾಜಕೀಯೇತರ ವಿಭಾಗವಾಗಿದೆ.ನಾ.ಸೀತಾರಾಮ ಅವರು 2016 ಆರ್.ಎಸ್.ಎಸ್.ವಿಭಾಗ ಕಾರ್ಯವಾಹರಾಗಿ ನಿಯುಕ್ತಿಗೊಂಡಿದ್ದರು.ಇದೀಗ ವಿಭಾಗದಿಂದ ದಕ್ಷಿಣ ಪ್ರಾಂತಕ್ಕೆ ಪದೋನ್ನತಿ ಹೊಂದಿದ್ದಾರೆ.
- Advertisement -