Wednesday, April 24, 2024
spot_imgspot_img
spot_imgspot_img

ನೇರಳಕಟ್ಟೆ ಎಪ್ರಿಲ್ 3 ರಂದು ‘ಜನಪ್ರಿಯ ಸಮ್ಮಿಲನ’ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಮಾಣಿ ಸಮೀಪದ ನೇರಳಕಟ್ಟೆ ಜನಪ್ರಿಯ ಗಾರ್ಡನ್ಸ್ ಗೆ 2 ವರ್ಷ ತುಂಬಿದ ಸ್ಮರಣಾರ್ಥ ಅಶಕ್ತ ಕುಟುಂಬದ ಉಚಿತ ವಿವಾಹ ಹಾಗೂ ಜನಪ್ರಿಯ ಪ್ರಶಸ್ತಿ ಪ್ರದಾನ ಸಮಾರಂಭ ‘ಜನಪ್ರಿಯ ಸಮ್ಮಿಲನ’ವು ಎ.3ರಂದು ಸಂಜೆ 5:30ಕ್ಕೆ ಜನಪ್ರಿಯ ಗಾರ್ಡನ್ಸ್ ನಲ್ಲಿ ಜರುಗಲಿದೆ.

ಜನಪ್ರಿಯ ಸಮೂಹ ಸಂಸ್ಥೆಗಳ ಸ್ಥಾಪಕ ಹಾಗೂ ಹಾಸನದ ಖ್ಯಾತ ವೈದ್ಯ ಡಾ. ಅಬ್ದುಲ್ ಬಶೀರ್ ವಿ.ಕೆ. ಅಧ್ಯಕ್ಷತೆ ವಹಿಸಲಿದ್ದು, ಸಾಮಾಜಿಕ ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಗಣ್ಯರು ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ಉಚಿತ ವಿವಾಹ ನಡೆಯಲಿದೆ.

ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಸಾಹಿತಿ, ಕೃಷಿಕ, ಶಿಕ್ಷಣ ತಜ್ಞರಾದ ಡಾ. ನರೇಂದ್ರ ರೈ ದೇರ್ಲ ಹಾಗೂ ಬಡವರ ಸೇವೆಗೈಯ್ಯುವ ಉದ್ಯಮಿ ಆಸ್ಕರ್ ಆನಂದ್ ಅವರಿಗೆ ಈ ಬಾರಿಯ ಜನಪ್ರಿಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಇದೇ ಸಂದರ್ಭ ಡಾ. ಅಬ್ದುಲ್ ಬಶೀರ್ ವಿ.ಕೆ. ಹಾಗೂ ನಸ್ರೀನ್ ಬಶೀರ್ ದಾಂಪತ್ಯದ 27ನೇ ವೈವಾಹಿಕ ವರ್ಷಾಚರಣೆಯೂ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

- Advertisement -

Related news

error: Content is protected !!