Saturday, April 20, 2024
spot_imgspot_img
spot_imgspot_img

ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳಾಗಿ ಎನ್​​.ವಿ ರಮಣ ನೇಮಕ: ಏಪ್ರಿಲ್ 24ರಂದು ಪ್ರಮಾಣ ವಚನ ಸ್ವೀಕಾರ

- Advertisement -G L Acharya panikkar
- Advertisement -

ನವದೆಹಲಿ: ಮುಂದಿನ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳಾಗಿ ಎನ್​​.ವಿ ರಮಣ ಅವರನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ನೇಮಕ ಮಾಡಿದ್ದಾರೆ. ಏಪ್ರಿಲ್ 24ರಂದು 48ನೇ ಸಿಜೆಐ ಆಗಿ ರಮಣ ಅವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಪ್ರಸ್ತುತ ಸಿಜೆಐ ಎಸ್​.ಎ ಬೋಬ್ಡೆ ಅವರು ಏಪ್ರಿಲ್ 23ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಅವರಿಗೆ ಮುಂದಿನ ಸಿಜೆಐ ಸ್ಥಾನಕ್ಕೆ ಹೆಸರು ಶಿಫಾರಸು ಮಾಡುವಂತೆ ಕೇಳಿತ್ತು. ಕಳೆದ ವಾರ ಬೋಬ್ಡೆ ಅವರು ರಮಣ ಅವರನ್ನ ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದರು.

ಆಂಧ್ರಪ್ರದೇಶದ ಕೃಷಿ ಹಿನ್ನೆಲೆಯ ಕುಟುಂಬದವರಾದ ನುಥಲಪತಿ ವೆಂಕಟ ರಮಣ ಅವರು 1957ರ ಆಗಸ್ಟ್ 27ರಂದು ಜನಿಸಿದರು. 2000 ಇಸವಿಯಲ್ಲಿ ಆಂಧ್ರಪ್ರದೇಶ ಹೈಕೋರ್ಟ್​ನ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

ಬಳಿಕ ದೆಹಲಿ ಹೈಕೋರ್ಟ್​ನ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 2014ರಲ್ಲಿ ಸುಪ್ರೀಂಕೋರ್ಟ್​ ಜಡ್ಜ್​​ ಆಗಿ ನೇಮಕಗೊಂಡಿದ್ದರು. ಆಂಧ್ರಪ್ರದೇಶ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿಯೂ ರಮಣ ಅವರು ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ ಬೋಬ್ಡೆ ರವರ ನಂತರ ಸುಪ್ರೀಂಕೋರ್ಟ್​ನಲ್ಲಿ ಅತ್ಯಂತ ಹಿರಿಯ ಜಡ್ಜ್ ನ್ಯಾ.​​ಎನ್​​.ವಿ ರಮಣ ರವರಿಗೆ 2022 ಆಗಸ್ಟ್​​ 6ರವರೆಗೆ ಅಂದ್ರೆ ಒಂದು ವರ್ಷ 4 ತಿಂಗಳ ಕಾಲ ಸಿಜೆಐ ಆಗಿ ಸೇವೆ ಸಲ್ಲಿಸಲು ಅವಧಿ ಇರಲಿದೆ.

- Advertisement -

Related news

error: Content is protected !!