Thursday, September 10, 2026
spot_imgspot_img
spot_imgspot_img

ನಿಫಾ ವೈರಸ್ ಹೆಚ್ಚಳ; ಕೇರಳದಿಂದ ಬರುವವರ ಮೇಲೆ ಕಣ್ಗಾವಲು

- Advertisement -
- Advertisement -

ಕೊರೊನಾ ವೈರಸ್ ಮತ್ತು ನಿಫಾ ವೈರಸ್ ಕೇರಳದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಬರುವ ವ್ಯಕ್ತಿಗಳನ್ನು ಕಣ್ಗಾವಲಿನಲ್ಲಿಡಲಾಗುವುದು ಎಂದು ಕರ್ನಾಟಕ ಸರ್ಕಾರ ಹೇಳಿದೆ. ಕೇರಳದ ಗಡಿಯಲ್ಲಿರುವ ಜಿಲ್ಲೆಗಳಲ್ಲಿಯೂ ಕಣ್ಗಾವಲು ತೀವ್ರಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನಾವು ಈಗಾಗಲೇ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ (ನಿಫಾ ವೈರಸ್ ವಿರುದ್ಧ) ವಿವರವಾದ ಸಲಹೆಯನ್ನು ನೀಡಿದ್ದೇವೆ. ಎಲ್ಲಾ ಗಡಿ ಜಿಲ್ಲೆಗಳಲ್ಲಿ ಈಗಾಗಲೇ ಸುಧಾರಿತ ಕಣ್ಗಾವಲು ಕ್ರಮಗಳು ಜಾರಿಯಲ್ಲಿವೆ. ಕೇರಳದಿಂದ ಬರುವ ಜನರು ಕಣ್ಗಾವಲಿನಲ್ಲಿರುತ್ತಾರೆ’ ಎಂದು ಕರ್ನಾಟಕ ಆರೋಗ್ಯ ಆಯುಕ್ತ ಕೆ.ವಿ.ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.

ಸೆಪ್ಟೆಂಬರ್ 7 ರಂದು, ರಾಜ್ಯದಲ್ಲಿ ನಿಫಾ ವೈರಸ್ ನ ಮೊದಲ ದೃಢೀಕೃತ ಪ್ರಕರಣ ವರದಿಯಾದ ನಂತರ ಕಣ್ಗಾವಲು ಮತ್ತು ಸನ್ನದ್ಧತೆಯನ್ನು ಬಲಪಡಿಸುವಂತೆ ಕರ್ನಾಟಕ ಸರ್ಕಾರ ಕೇರಳದ ಗಡಿಯಲ್ಲಿರುವ ಜಿಲ್ಲೆಗಳ ಆಡಳಿತಗಳಿಗೆ ನಿರ್ದೇಶನ ನೀಡಿತ್ತು. ಜ್ವರ, ಬದಲಾದ ಮಾನಸಿಕ ಸ್ಥಿತಿ, ತೀವ್ರ ದೌರ್ಬಲ್ಯ, ತಲೆನೋವು, ಉಸಿರಾಟದ ತೊಂದರೆ, ಕೆಮ್ಮು, ವಾಂತಿ, ಸ್ನಾಯು ನೋವು, ಸೆಳೆತ ಮತ್ತು ಅತಿಸಾರದಂತಹ ಯಾವುದೇ ರೋಗಲಕ್ಷಣಗಳಿರುವ ಕೇರಳದಿಂದ ಬರುವವರ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಕೇಳಲಾಯಿತು.

- Advertisement -

Related news

error: Content is protected !!