Saturday, April 20, 2024
spot_imgspot_img
spot_imgspot_img

*ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದ ಆಡಳಿತ ಅಧಿಕಾರಿಯಾಗಿ ದಕ್ಷ, ಪ್ರಾಮಾಣಿಕ ಅಧಿಕಾರಿ ನೇಮಕ*

- Advertisement -G L Acharya panikkar
- Advertisement -

ಬಂಟ್ವಾಳ: ಕಾರಣೀಕ ಶ್ರೀ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದ ಆಡಳಿತ ಅಧಿಕಾರಿಯಾಗಿ ದಕ್ಷ , ಪ್ರಮಾಣಿಕ ಅಧಿಕಾರಿ ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್. ಆರ್ ಅವರನ್ನು ಧಾರ್ಮಿಕ ದತ್ತಿ ಇಲಾಖೆ ನೇಮಕ ಮಾಡಿದೆ.

ಕಳೆದ ಒಂದುವರೆ ವರ್ಷಗಳಿಂದ ಬಂಟ್ವಾಳ ತಾಲೂಕಿನ ತಹಶಿಲ್ದಾರ್ ಆಗಿದ್ದು ಕೊಂಡು ಉತ್ತಮ ಅಧಿಕಾರಿ ಆಗಿರುವ ಇವರು ಪನೋಲಿಬೈಲು ಕ್ಷೇತ್ರದ ಭಕ್ತೆ ಕೂಡ ಹೌದು .

ಕೋವಿಡ್ ನಿಯಂತ್ರಣದ ವ್ಯವಸ್ಥೆಗಳ ಸಂದರ್ಭದಲ್ಲಿ ಯೂ ಇವರ ಪಾತ್ರ ಹಿರಿದಾಗಿತ್ತು. ಪ್ರಸ್ತುತ ಇವರು ಪನೋಲಿಬೈಲು ಕಲ್ಲುರ್ಟಿ ದೇವಸ್ಥಾನ ದ ಆಡಳಿತ ಅಧಿಕಾರಿಯಾಗಿ ನೇಮಕವಾಗಿದ್ದಾರೆ.

ಇವರ ಅವಧಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಹಾಗೂ ಭಕ್ತರ ಕೆಲವೊಂದು ಬೇಡಿಕೆಗಳು ಈಡೇರಿಕೆಯಾಗಲಿ , ಸಾವಿರಾರು ಭಕ್ತರು ಕ್ಷೇತ್ರ ಕ್ಕೆ ಬೇಟಿ ನೀಡುತ್ತಿದ್ದು ಆಡಳಿತ ಅಧಿಕಾರಿಯವರ ಆಡಳಿತದ ಅವಧಿಯಲ್ಲಿ ಭಕ್ತರ ಅನುಕೂಲ ವಾಗುವಂತಹ ಕಾರ್ಯಗಳು ನೆರವೇರಲಿ ಎಂಬುದು ಭಕ್ತರ ಆಶಯ.

- Advertisement -

Related news

error: Content is protected !!