Friday, April 26, 2024
spot_imgspot_img
spot_imgspot_img

ಪೆರುವಾಯಿ: ಬಿಜೆಪಿ ಪುಣಚ ಮಹಾಶಕ್ತಿ ಕೇಂದ್ರದ ಪೆರುವಾಯಿ ಬೂತ್‌ಗಳಲ್ಲಿ ನಾಮಫಲಕ ಅಳವಡಿಕೆ

- Advertisement -G L Acharya panikkar
- Advertisement -

ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಪುಣಚ ಮಹಾಶಕ್ತಿ ಕೇಂದ್ರ ಪೆರುವಾಯಿ ಗ್ರಾಮದ 84, 85 ಮತ್ತು 86 ನೇ ಬೂತ್ ಸಮಿತಿಯ ಅಧ್ಯಕ್ಷರಾದ ಜಯರಾಮ ಆಳ್ವ ಬದಿಯಾರು, ವರುಣ್ ರೈ, ಹಾಗೂ ಮನೋರಾಜ್ ರೈ ಅಡ್ವಾಯಿ ಇವರ ಮನೆಗೆ ನಾಮ ಫಲಕ ಅಳವಡಿಕೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವಿಧಾನಸಭಾ ಶಾಸಕ ಸಂಜೀವ ಮಠಂದೂರು, ಮ್ತತು ಗ್ರಾಮಾಂತರ ಮಂಡಲದ ಅಧ್ಯಕ್ಷ ರಾಧಕೃಷ್ಣ ಆಳ್ವ, ಉಪಾಧ್ಯಕ್ಷರಾದ ಅರುಣ್ ವಿಟ್ಲ, ಹರಿಪ್ರಸಾದ್ ಯಾದವ್, ಮುಕುಂದ ಬಜತ್ತೂರು, ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮ ಮುಂಗ್ಲಿಮನೆ, ಜಯಶ್ರಿ ಕೋಡಂದುರು, ರಾಜೇಶ್ ಕರವೀರ, ದಯಾನಂದ ಶೆಟ್ಟಿ ಉಜಿಮರೆಮಾರ್, ಸೇರಿದಂತೆ ಪಕ್ಷದ ಹಲವು ಪ್ರಮುಖರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತರಾದ ಶ್ರೀ ಪ್ರಭಾಕರ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಶಿವರಾಮ ಮಣಿಯಾಣಿ, ಅಲೆಕ್ಸ್ ಡಿಸೋಜ, ಕಲಿಸ್ತಾ ಡಿ’ಸೋಜ, ಲಕ್ಷಣ ಆಚಾರ್ಯ, ಶೀನ ಪೂಜಾರಿ ಇವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪೆರುವಾಯಿಯ ಹಿರಿಯ ಕಾರ್ಯಕರ್ತರಾದ ಕಾಂತಪ್ಪ ರೈ ಅಡ್ವಾಯಿ ಇವರು ಮರಳಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷಕ್ಕೆ ಇನ್ನಷ್ಟು ಬಲತುಂಬಿದರು.

ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರದ ಸಂಚಾಲಕರಾದ ಮನೋಹರ ರೈ ಪೇರಡ್ಕ, 84 ನೇ ಬೂತ್ ಅಧ್ಯಕ್ಷ ಮತ್ತು ಗ್ರಾ.ಪಂ ಸದಸ್ಯ ವರುಣ್ ರೈ, 86ನೇ ಬೂತ್ ಅಧ್ಯಕ್ಷ ಮನೋರಾಜ ರೈ, 85ನೇ ಬೂತ್ ಅಧ್ಯಕ್ಷ ಜಯರಾಮ ಆಳ್ವ, ಚಂದ್ರಹಾಸ್ ಶೆಟ್ಟಿ, ಗೋಪಾಲ ಎ, ಗ್ರಾಂ ಪಂ ಸದಸ್ಯ ನಾರಾಯಣ ನಾಯ್ಕ, ಲಲಿತಾ ಆಚಾರ್ಯ, ಗೋಪಾಲಕೃಷ್ಣ ಶೆಟ್ಟಿ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!