- Advertisement -
- Advertisement -
ಪುತ್ತೂರು: ಜ 1: ಪಾದಚಾರಿ ಮಹಿಳೆಯೊಬ್ಬರಿಗೆ ದ್ವಿಚಕ್ರ ವಾಹನ ಸವಾರನೊಬ್ಬ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಪುತ್ತೂರು ತಾಲೂಕಿನ ಕೋಡಿಂಬಾಡಿ ಬಳಿ ಜನವರಿ 1ರ ಬೆಳಿಗ್ಗೆ ನಡೆದಿದೆ. ಅಪಘಾತಕ್ಕೆ ಒಳಗಾದ ಮಹಿಳೆಯೂ ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಪುತ್ತೂರಿನ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.
ಸೇಡಿಯಾಪು ನಿವಾಸಿ ದಿ. ದೇವಣ್ಣ ಎಂಬವರ ಪತ್ನಿ ಲಕ್ಷ್ಮೀ ಎಂಬ ಮಹಿಳೆ ಗಾಯಗೊಂಡವರು. ಕೋಡಿಂಬಾಡಿಯ ಉಮ್ಮರ್ ಎಂಬವರ ಅಡಿಕೆ ಗಾರ್ಬಲ್ ನ ಎದುರು ಈ ಅಪಘಾತ ಸಂಭವಿಸಿದೆ.
- Advertisement -