ಪುತ್ತೂರು: ಬೊಳುವಾರು ಇನ್ಲ್ಯಾಂಡ್ ಮಯೂರ ಬಿಲ್ಡಿಂಗ್ನಲ್ಲಿ ಕಾಂಜೀವರಂ ಸಾರಿಗಳ ಶೋರೂಮ್ ತಮನ್ವಿ ಸಿಲ್ಕ್ಸ್ ಮತ್ತು ಸಾರೀಸ್ ಶುಭಾರಂಭಗೊಂಡಿತ್ತು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ರಿಬ್ಬನ್ ಕತ್ತರಿಸಿ ಮಳಿಗೆಯನ್ನು ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಡಾ.ಗೀತಾಪ್ರಕಾಶ್ ದೀಪ ಬೆಳಗಿಸಿ ಶುಭ ಹಾರೈಸಿದರು.
ಅಕ್ಷಯ ಸಮೂಹ ಸಂಸ್ಥೆಗಳ ಚಯರ್ಮೇನ್ ಜಯಂತ್ ನಡುಬೈಲು, ವಿಟ್ಲ ಸುರಕ್ಷಾ ಆಸ್ಪತ್ರೆಯ ಡಾ. ಗಾಯತ್ರಿ ಜಿ. ಪ್ರಕಾಶ್, ಪುತ್ತೂರು ನಗರಸಭಾ ಮಾಜಿ ಸದಸ್ಯ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಐಶ್ವರ್ಯ ಬ್ಯೂಟಿ ಪಾರ್ಲರ್ನ ಮಾಲಕಿ ಐಶ್ವರ್ಯ ಚಂದ್ರಶೇಖರ್, ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಮಾಜಿ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ವಿಜಯ ಸುಪಾರಿ ಇಂಡಸ್ಟ್ರೀಸ್ ಮಾಲಕ ರಾಮ ಭಟ್, ಇನ್ಲ್ಯಾಂಡ್ ಮಯೂರ್ನ ಮೆನೇಜರ್ ಮಹೇಶ್, ಆರ್ಕಿಟೆಕ್ಚರ್ ಮಯೂರ ಜಾಧವ್, ಪೆಟ್ ಪ್ಲಾನೆಟ್ನ ಪ್ರವೀಣ್ರಾಜ್, ಸಾಯಿಪೂಜಾ ಗ್ರೂಪ್ನ ಮಾಲಕ ಯತಿಶ್ ಸುವರ್ಣ, ರೋಟರಿ ಮಾಜಿ ಅಧ್ಯಕ್ಷ ಪಶುಪತಿ ಶರ್ಮಾ, ಪುರಂದರ ರೈ, ಕೊಂರ್ಬಡ್ಕ ಬೀಡು, ರಾಧಾಕೃಷ್ಣ ಪೂಜಾರಿ, ಭಾಸ್ಕರ ಕುಡುಪು, ಭರತ್ ಸೇರಿದಂತೆ ವಿವಿಧ ಗಣ್ಯರು ಆಗಮಿಸಿ ಶುಭ ಹಾರೈಸಿದರು.
ಉತ್ತಮ ಗುಣಮಟ್ಟ, ವಿವಿಧ ವಿನ್ಯಾಸದ ಸಾರಿಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಕಾಂಜೀವರಂ ಟ್ರೇಡ್ ಮಾರ್ಕ್ ಹೊಂದಿರುವ ಸಾರಿಗಳು ಕಂಪನಿಯಿಂದಲೇ ನೇರವಾಗಿ ಗ್ರಾಹಕರಿಗೆ ಇಲ್ಲಿ ಲಭ್ಯವಿದೆ.
ಬ್ರಾಂಡೆಡ್ ಕಂಪೆನಿಗಳ ವಿವಿಧ ವಿನ್ಯಾಸದ ಸಾರಿಗಳು ರೂ.3000ದ ಆರಂಭದ ಬೆಲೆಯಲ್ಲಿ ಲಭ್ಯವಿದೆ. ಗ್ರಾಹಕರು ತಮ್ಮ ಇಷ್ಟವಾದ ಸಾರಿಗಳನ್ನು ಖರೀದಿಸಬಹುದು. ಗ್ರಾಹಕರ ಸಂಪೂರ್ಣ ಸಹಕಾರ ಕೋರುತ್ತೇವೆ ಎಂದು ಮಾಲಕರು ಮಾಲಾಶ್ರೀ ವಿಜೇತ್ ತಿಳಿಸಿದರು.