ಪುತ್ತೂರು: ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ(ರಿ).ಮಂಗಳೂರು ಇದರ ಜಿಲ್ಲಾ ಮಾಸಿಕ ಸಭೆಯನ್ನು ಸಂಘದ ಕಛೇರಿ ಬೊಳ್ವಾರು ಪುತ್ತೂರು ಇಲ್ಲಿ ದಿ.20.12.2020ನೇ ಆದಿತ್ಯ ವಾರ ಬೆಳಗ್ಗೆ 10.00ಕ್ಕೆ ನಡೆಯಿತು
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ರಾದ ಅಶೋಕ್ ನಾಯ್ಕ ಕೆದಿಲ ವಹಿಸಿದರು ಜಿಲ್ಲಾ ಕಾರ್ಯದರ್ಶಿ ಯಶವಂತ್ ಮಂಡೆಕೋಲು ಮತ್ತು ಘಟಕದ ಅಧ್ಯಕ್ಷ ರು ಪುತ್ತೂರು ಘಟಕದ ಕಾರ್ಯದರ್ಶಿ ವಿಮಲಾ ನಾಯ್ಕ ದೈತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಮಲಾ ದೈತೋಟ ಅವರ ಸ್ವಾಗತ ದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು ನಂತರ ಸಂಘದ ಸದಸ್ಯ ರಾದ ನಾರಾಯಣ ನಾಯ್ಕ ಸುದ್ದಿ ಬಿಡುಗಡೆ ಪತ್ರಿಕಾ ವರದಿಗಾರರು ಪುತ್ತೂರು. ಕೆಲವು ಸಮಯಗಳ ಹಿಂದೆ ನಿಧನರಾಗಿದ್ದು ಆ ಪ್ರಯುಕ್ತ ಸಭೆಯಲಿ ಎರಡು ನಿಮಿಷ ಮೌನಾ ಪ್ರಾರ್ಥನೆ ಮಾಡಲಾಯಿತು ನಂತರ ಕಳೆದ ಮಾಸಿಕ ಸಭೆಯ ವರದಿಯನ್ನು ಜಿಲ್ಲಾ ಕಾರ್ಯದರ್ಶಿ ಯಶವಂತ ಮಂಡೆಕೋಲು ಮಂಡನೆ ಮಾಡಿದರು. ಪ್ರಮುಖ ಅಂಗವಾದ ಮಹಾಸಭೆಯ ಪ್ರಥಮ ವಾರ್ಷಿಕ ಕೋತ್ಸವದ ಬಗ್ಗೆ ವಿಸ್ತ್ರತವಾಗಿ ಚರ್ಚೆ ಮಾಡಲಾಯಿತು.
ಮಹಾಸಭೆಯ ದಿನಾಂಕವನ್ನು ‘ಫೆಬ್ರವರಿ 7 ಆದಿತ್ಯವಾರ 2021’ ಕಾರ್ಯಕ್ರಮದ ದಿನ ನಿಗದಿ ಮಾಡಲಾಯಿತು. ಕಾರ್ಯಕ್ರಮದ ಯಶಸ್ಸುಗೆ ವಿವಿಧ ಸಮಿತಿಗಳಾದ. ಪ್ರಚಾರ ಸಮಿತಿ, ಹಣಕಾಸು ಸಮಿತಿ, ಅಹಾರ ಸಮಿತಿ, ಅಲಂಕಾರ ಸಮಿತಿ ಸಾಂಸ್ಕೃತಿಕ ಮತ್ತು ಇತರ ಸಮಿತಿ ಗಳ ರಚನೆ ಮಾಡಲಾಯಿತು. ಕಾರ್ಯ ಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪುರಸ್ಕಾರ ಸಮಾಜದಲ್ಲಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ. ಮರಾಟಿ ರಕ್ತನಿಧಿ ಕಾರ್ಯಕ್ರಮ ಮಾಡುವುದುದೆಂದು ತಿರ್ಮಾನವನ್ನು ಮಾಡಲಾಯಿತು.
ಅಂತಿಮವಾಗಿ ಜಿಲ್ಲಾಧ್ಯಕ್ಷರು ಒಂದು ತಿಂಗಳಿನಿಂದ ಬಂದಿರುವ ಸಮಸ್ಯೆಗಳು ಮತ್ತು ಅದನ್ನು ಸಮರ್ಥ ವಾಗಿ ನಿರ್ವಹಣೆ ಮಾಡಿದುದರ ಬಗ್ಗೆ ಸಭೆಗೆ ಮಾಹಿತಿ ನೀಡಿದರು ಮತ್ತು ಮುಂದಿನ ಮಹಾಸಭೆಯ ಯಶಸ್ವಿಗೆ ತಮ್ಮೆಲ್ಲರ ಸಹಕಾರವನ್ನು ನೀಡಬೇಕೆಂದು ವಿನಂತಿ ಮಾಡಿದರು ಕೊನೆಗೆ ಜಿಲ್ಲಾ ಖಜಾಂಚಿ ಚಿತ್ರಲತಾ ಅವರ ವಂದನಾರ್ಪನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.