Friday, May 23, 2025
spot_imgspot_img
spot_imgspot_img

ಪುತ್ತೂರು: ಸರಣಿ ಅಪಘಾತ; ಪ್ರಾಣಪಾಯದಿಂದ ಪಾರು..!

- Advertisement -
- Advertisement -

ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್‌, ಮಾರುತಿ ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ ನಡೆದ ಘಟನೆ ಸಂಟ್ಯಾರ್ ಜಂಕ್ಷನ್ ನಲ್ಲಿ ನಡೆದಿದೆ.

ಪುತ್ತೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಸಂಟ್ಯಾರ್ ಜಂಕ್ಷನ್‌ನಲ್ಲಿ ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುತ್ತಿದ್ದ ವೇಳೆ ಪಾಣಾಜೆ ಕಡೆಯಿಂದ ಬಂದ ಮಾರುತಿ (ಕೆಎಂ3ಎಂ.ಬಿ6672) ಎದುರಿನಿಂದ ಬಂದ ಸುಝುಕಿ ಎಕ್ಸಸ್(ಕೆಎ21 ಇಬಿ4576) ಡಿಕ್ಕಿ ಹೊಡೆದು ಎದುರಿನಿಂದ ಬಂದ ಬಜಾಜ್ ಪಲ್ಸರ್(ಕೆಎ21ವಿ5950) ಬೈಕ್ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದಿಂದ ಸುಝುಕಿ ಎಕ್ಸಸ್, ಪಲ್ಸರ್ ಬೈಕ್ ಹಾಗೂ ಮಾರುತಿ 800 ಜಖಂಗೊಂಡಿದ್ದು, ಅಪಘಾತದಿಂದ ಯಾವುದೇ ಗಾಯಗಳಾಗಿರುವುದಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!