Tuesday, April 16, 2024
spot_imgspot_img
spot_imgspot_img

ಹಂದಿ ಮಾಂಸ ಪದಾರ್ಥಕ್ಕೆ ವಿಷ ಬೆರೆಸಿ ತಂದೆಯ ಹತ್ಯೆಗೆ ಮುಂದಾದ ಮಕ್ಕಳು.!

- Advertisement -G L Acharya panikkar
- Advertisement -

 ಸುಬ್ರಹ್ಮಣ್ಯ:-ಮಕ್ಕಳಿಬ್ಬರು ಸೇರಿ ಹಂದಿ ಮಾಂಸ ಪದಾರ್ಥಕ್ಕೆ ವಿಷ ಬೆರೆಸಿ ತಂದೆಯ ಹತ್ಯೆಗೆ ಮುಂದಾದ ಘಟನೆಯೊಂದು ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಅಂಜೇರಿಯಿಂದ ವರದಿಯಾಗಿದೆ.

ವಿಷಯುಕ್ತ ಆಹಾರ ಸೇವಿಸಿ ಹೊನ್ನಪ್ಪ ನಾಯ್ಕ ಅಂಜೇರಿ ಅಸ್ವಸ್ಥಗೊಂಡ ವ್ಯಕ್ತಿ. ಮಕ್ಕಳಾದ ದೇವಿಪ್ರಸಾದ್ ಮತ್ತು ಲೋಕೇಶ್ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲೊಕೇಶ್

ದೇವಿಪ್ರಸಾದ್

ಓರ್ವ ಮಗ ಲೊಕೇಶ್ ಎಂಬವನು ಹೊನ್ನಪ್ಪರವರ ಮನೆ ಬಳಿಯಲ್ಲೇ ಕೊಟ್ಟಿಗೆಯಲ್ಲಿ ವಾಸವಿದ್ದು, ಇನ್ನೋರ್ವ ಮಗ ದೇವಿಪ್ರಸಾದ್ ಸುಳ್ಯದ ಗುತ್ತಿಗಾರಿನಲ್ಲಿ ವಾಸವಿದ್ದಾರೆ. ಜು 23ರ ರಾತ್ರಿ ಹೊನ್ನಪ್ಪರವರ ಮನೆಯಲ್ಲಿ ಹಂದಿ ಪದಾರ್ಥ ಮಾಡಿದ್ದು ಅವರು ಊಟ ಮಾಡಿ ಮಲಗಿದ್ದರು. ರಾತ್ರಿ ದೇವಿಪ್ರಸಾದ್ ಹಂದಿ ಮಾಂಸ ಪದಾರ್ಥಕ್ಕೆ ವಿಷ ಬೆರೆಸಿದ್ದು, ಇದಕ್ಕೆ ಲೊಕೇಶ್ ಕೂಡಾ ಸಹಕರಿಸಿದ್ದಾರೆ ಎಂದು ದೂರಲಾಗಿದೆ. ಜು.24 ರ ಬೆಳಗ್ಗೆ ಹೊನ್ನಪ್ಪ ಬೆಳಗ್ಗೆ ಬೇಗ ಕೆಲಸಕ್ಕೆ ಹೋಗುವ ಸಲುವಾಗಿ ಹಂದಿ ಮಾಂಸ ಪದಾರ್ಥದೊಂದಿಗೆ ಆಹಾರ ಸೇವಿಸಿದ್ದು, ಬಳಿಕ ವಾಂತಿ ಮಾಡಿಕೊಂಡಿದ್ದಾರೆ. ತೀವ್ರವಾಗಿ ಅಸ್ವಸ್ಥ ಗೊಂಡಾಗ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಅವರು ಚೇತರಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಕುರಿತು ಹೊನ್ನಪ್ಪ ಅವರ ಪತ್ನಿಯು ಇಬ್ಬರು ಪುತ್ರರ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಿದ್ದು,ತನಿಖೆ ಮುಂದುವರೆದಿದೆ.

- Advertisement -

Related news

error: Content is protected !!